‘ವಾಹನಗಳ ಕಸ’ಕ್ಕೆ ಮುಕ್ತಿ ನೀಡಿ
ಪೊಲೀಸ್ ಠಾಣೆಗಳ ಮುಂದೆ ಬಿದ್ದಿರುವ
ಮಾನ್ಯರೆ,
ಬೆಂಗಳೂರು ನಗರದಲ್ಲಿ ಎಲ್ಲ ಪೊಲೀಸ್ ಠಾಣೆಗಳ ಮುಂದೆ ವಶ ಪಡಿಸಿಕೊಂಡಿರುವ ವಾಹನಗಳು ಕಸದ ರೀತಿಯಲ್ಲಿ ಬಿದ್ದುಕೊಂಡು ಧೂಳಿನಿಂದ ತುಂಬಿ ನಾರುತ್ತಿದೆ. ಹಲವಾರು ರಸ್ತೆಗಳಲ್ಲಿ ಜನರು ಸಂಚರಿಸುವುದೇ ತ್ರಾಸದಾಯಕವಾಗಿದೆ. ಠಾಣೆಗಳ ಮುಂಭಾಗದಲ್ಲಿರುವ ಇಂತಹ ರಸ್ತೆಗಳಲ್ಲೂ ವಶಪಡಿಸಿಕೊಳ್ಳಲಾದ ಹಳೆಯ ವಾಹನಗಳು ತುಂಬಿಕೊಂಡಿವೆ.
ವಿಶೇಷವಾಗಿ ಉಪ್ಪಾರ್ ಪೇಟೆ ಪೊಲೀಸ್ ಠಾಣೆ ಮತ್ತು ಕಾಟನ್ ಪೇಟೆಯ ಮುಖ್ಯ ರಸ್ತೆಯ ಠಾಣೆಯ ಮುಂದಿನ ರಸ್ತೆಯೆಲ್ಲಾ ಈ ಗುಜರಿ ವಾಹನಗಳಿಗೆ ಮೀಸಲಿರಿಸಿದಂತಿದೆ. ಕಾಟನ್ ಪೇಟೆಯ ಮುಖ್ಯ ರಸ್ತೆಯು ಮೊದಲೇ ಇಕ್ಕಟ್ಟಾಗಿದ್ದು, ರಸ್ತೆಯ ಎರಡೂ ಬದಿಗಳನ್ನು ಈ ವಾಹನಗಳು ಆಕ್ರಮಿಸಿಕೊಂಡಿವೆ.
ಬೇರೆ ಯಾವುದಾದರೂ ವಿಶಾಲ ಜಾಗದಲ್ಲಿ ಶೆಡ್ ನಿರ್ಮಿಸಿ ಈ ವಾಹನಗಳನ್ನು ಅಲ್ಲಿಗೆ ಸ್ಥಳಾಂತರಿಸಿದರೆ ಸಾರ್ವಜನಿಕರ ಸಮಸ್ಯೆ ಕೊನೆಗೊಂಡರೆ, ಪೊಲೀಸ್ ಠಾಣೆಯ ಸೌಂದರ್ಯಕ್ಕೂ ಕಾರಣವಾಗುತ್ತದೆ. ಸಂಬಂಧಪಟ್ಟವರು ಈ ಸಮಸ್ಯೆಗಳ ಬಗ್ಗೆ ಗಮನ ನೀಡಿಯಾರೇ?
Next Story