ಇಂದು ಮಂಗಳೂರು ನಗರಕ್ಕೆ ನೀರಿಲ್ಲ
ಮಂಗಳೂರು, ಮೇ 29: ಮಂಗಳೂರು ಮಹಾನಗರ ಪಾಲಿಕೆಗೆ ತುಂಬೆ ಡ್ಯಾಮ್ನಿಂದ ನೀರು ಸರಬರಾಜು ಮಾಡುವ ಮುಖ್ಯ ಕೊಳವೆಯಲ್ಲಿ ಕೊಟ್ಟಾರ ಚೌಕಿ ಬಳಿ ಸೋರುವಿಕೆ ಉಂಟಾಗಿದೆ. ಮೇ 30ರಂದು ಈ ಕೊಳವೆಯನ್ನು ದುರಸ್ತಿ ಮಾಡಲಾಗುತ್ತದೆ.
ಈ ಹಿನ್ನೆಲೆಯಲ್ಲಿ ಬೆಳಗ್ಗೆ 8ರಿಂದ ಸಂಜೆ 6ರವರೆಗೆ ಭಾಗಶಃ ಮಂಗಳೂರು ನಗರ, ಪ್ರದೇಶ, ಕೋಡಿಕಲ್, ಕೊಟ್ಟಾರ ಜಲ್ಲಿಗುಡ್ಡ, ಕೂಳೂರು, ಪಣಂಬೂರು ಹಾಗೂ ಸುರತ್ಕಲ್, ಕಾಟಿಪಳ್ಳ ಪ್ರದೇಶಗಳಲ್ಲಿ ನೀರು ವಿತರಣೆಯನ್ನು ಸಂಪೂರ್ಣ ಸ್ಥಗಿತಗೊಳಿಸಲಾಗುವುದು ಎಂದು ಮನಪಾ ಪ್ರಕಟನೆ ತಿಳಿಸಿದೆ.
Next Story