ನಾಟಿವೈದ್ಯ ದೈತೋಟ ವೆಂಕಟರಮಣ ಭಟ್ ನಿಧನ
ಪುತ್ತೂರು, ಜು.21: ಖ್ಯಾತ ಪರಿಸರವಾದಿ ದಿ.ಶಂಪಾ ದೈತೋಟ ಅವರ ಸಹೋದರ ಹೆಸರಾಂತ ನಾಟಿವೈದ್ಯ ಪಾಣಾಜೆ ಗ್ರಾಮದ ದೈತೋಟ ನಿವಾಸಿ ವೆಂಕಟರಮಣ ಭಟ್(80) ಹೃದಯಾಘಾತದಿಂದ ಇಂದು ಬೆಳಗ್ಗೆ ನಿಧನರಾದರು.
ನಾಟಿವೈದ್ಯರಾಗಿ ‘‘ಮುದ್ದಣ್ಣ’’ ಎಂದೇ ಸುಪರಿಚಿತರಾಗಿದ್ದ ವೆಂಕಟರಮಣ ಭಟ್ ಇಂದು ಬೆಳಗ್ಗೆ 7 ಗಂಟೆ ಸುಮಾರಿಗೆ ಪುತ್ತೂರಿಗೆ ತೆರಳಲು ಪಾಣಾಜೆಯಲ್ಲಿ ಬಸ್ ಹತ್ತುತ್ತಿದ್ದ ವೇಳೆ ಹೃದಯಾಘಾತಕ್ಕೊಳಗಾಗಿ ಕುಸಿದರೆನ್ನಲಾಗಿದೆ. ಕೂಡಲೇ ಅವರನ್ನು ಆಸ್ಪತ್ರೆ ಸಾಗಿಸಲಾಯಿತಾದರೂ ಅಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದರು.
ಮೃತರು ಪತ್ನಿ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
ಸಂತಾಪ: ಶಾಸಕ ಶಕುಂತಳಾ ಶೆಟ್ಟಿ, ಸ್ಥಳೀಯ ಜನಪ್ರತಿನಿಧಿಗಳು, ಗಡಿನಾಡ ಶ್ರೇಯಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಅಬೂಬಕರ್ ಆರ್ಲಪದವು ಸೇರಿದಂತೆ ಹಲವು ಗಣ್ಯರ ಮೃತರ ಮನೆಗೆ ಭೇಟಿ ಅಂತಿಮ ದರ್ಶನ ಪಡೆದರು.
Next Story