ಟಿಪ್ಪು ಸುಲ್ತಾನನ ರಾಜನೀತಿ
ಇತಿಹಾಸ-ವರ್ತಮಾನ
ಇವನು ಭಿಕ್ಷುಕರಿಗೆ ರಾಜ್ಯವಾಳಲು ಹೇಳಿದರೂ ಆಶ್ಚರ್ಯವಿಲ್ಲ
ತನ್ನ ಸಾಮ್ರಾಜ್ಯದಲ್ಲಿ ದುರ್ಬಲರಿಗೂ ಪ್ರಬಲರಿಗೂ
ಸಮಾನ ಅವಕಾಶವಿರಬೇಕೆಂದು ಟಿಪ್ಪುಸುಲ್ತಾನ ಬಯಸುತ್ತಾನೆ.
ನೈತಿಕತೆಯ ಜೊತೆ ಅರ್ಥನೀತಿಯ ಜೊತೆ ವ್ಯತ್ಯಾಸ ಅರಿಯದ ರಾಜ ಇವನು. ಆಸ್ತಿವಂತರಿಗೆ ತಮ್ಮ ಸೌಲಭ್ಯಗಳನ್ನು ಬಿಟ್ಟುಕೊಡುವಂತೆ ಹೇಳುತ್ತಾನೆ.
ಕೃಷಿಕರನ್ನು ರಕ್ಷಿಸುತ್ತಾನೆ. ತೆರಿಗೆ ಕಟ್ಟಲು ಹೇಳುತ್ತಾನೆ.
ಭೂ ಮಾಲಕರು ದೂರಿದರೆ ಸಾಮಾಜಿಕ ನ್ಯಾಯದ
ಬೋಧನೆ ಮಾಡುತ್ತಾನೆ. ಯಾರು ಶ್ರೀಮಂತರಾಗಿದ್ದಾರೋ
ವಂಶಪಾರಂಪರ್ಯ ಸಂಪತ್ತು ಗಳಿಸಿದ್ದಾರೋ, ಅವರಿಗೆ
ಜನರ ಕಲ್ಯಾಣ ಕಾರ್ಯಕ್ರಮಗಳಲ್ಲಿ ತೊಡಗುವಂತೆ
ಒತ್ತಾಯಿಸುತ್ತಾನೆ. ಹೀಗೆ ಮುಂದುವರಿದು ಅವನು
ಒಂದು ದಿನ ಭಿಕ್ಷುಕರಿಗೆ ಕುದುರೆಯನ್ನೇರಲು
ಹೇಳಿ ರಾಜ್ಯ ಭಾರ ಮಾಡಲು ಅಧಿಕಾರ ಕೊಟ್ಟರೆ
ಆಶ್ಚರ್ಯವೇನೂ ಇಲ್ಲ.
(ಜನರಲ್ ಮೆಡೋಸ್ನು ಲಾರ್ಡ್ ಕಾರನ್ ವಾಲೀಸನಿಗೆ- ಟಿಪ್ಪುವನ್ನು ಕುರಿತು ಬರೆದ ಪತ್ರ.)
Next Story