ವೃದ್ಧನನ್ನು ಸತಾಯಿಸಿದ ವೈದ್ಯರು: ಆರೋಪ
ಬೆಂಗಳೂರು, ಆ.14: ಪಾರ್ಶ್ವವಾಯುನಿಂದ ಬಳಲುತ್ತಿದ್ದ ವೃದ್ಧರೊಬ್ಬರಿಗೆ ಸೂಕ್ತ ಸಮಯಕ್ಕೆ ಚಿಕಿತ್ಸೆ ನೀಡದೆ ಸತಾಯಿಸಿದ ಪ್ರಕರಣ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆದಿರುವ ಆರೋಪ ಕೇಳಿಬಂದಿದೆ.
ನಗರದ ತರಿಕೆರೆಯ ಹಸನ್ಸಾಬ್ ಎಂಬುವರು ಪಾರ್ಶ್ವವಾಯುವಿನಿಂದ ಬಳಲುತ್ತಿದ್ದ ವೃದ್ಧ ಎಂದು ತಿಳಿದುಬಂದಿದ್ದು, ಹಸನ್ಸಾಬ್ ಅವರನ್ನು ಸೋಮವಾರ ಸಂಬಂಧಿಕರು ವಿಕ್ಟೋರಿಯಾ ಆಸ್ಪತ್ರೆಗೆ ಕರೆತಂದಿದ್ದರು.
ಆದರೆ, ವೈದ್ಯರ ನಿರ್ಲಕ್ಷದಿಂದ ಹಸನ್ಸಾಬ್ ಅವರು ಒಂದು ತಾಸುಗಳ ಕಾಲ ಆಸ್ಪತ್ರೆ ಹೊರ ಭಾಗದಲ್ಲಿ ಕಾಯಬೇಕಾದ ಸ್ಥಿತಿ ಉಂಟಾಯಿತು. ಸಾರ್ವಜನಿಕರು ಈ ವಿಚಾರವಾಗಿ ವೈದ್ಯರನ್ನು ತರಾಟೆಗೆ ತೆಗೆದುಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಸಿಬ್ಬಂದಿಗಳು ಅವರನ್ನು ಆಸ್ಪತ್ರೆಗೆ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
Next Story