ನಂಬಿಕೆಯ ಹೆಸರಿನಲ್ಲಿ ನಡೆಯುವ ಹಿಂಸೆಗಳನ್ನು ಒಪ್ಪಲಾಗದು: ಪ್ರಧಾನಿ ಮೋದಿ
ಗೋರಕ್ಷಕರಿಗೆ ಎಚ್ಚರಿಕೆ
ಹೊಸದಿಲ್ಲಿ, ಆ.15: ನಂಬಿಕೆಯ ಹೆಸರಿನಲ್ಲಿ ನಡೆಯುವ ಹಿಂಸೆಗಳನ್ನು ಒಪ್ಪಲಾಗದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು.
ದೇಶದ 71ನೆ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಅವರು, ತಮ್ಮ ನಂಬಿಕೆಯ ಹೆಸರಿನಲ್ಲಿ ಇತರರ ಮೇಲೆ ನಡೆಸುವ ಹಿಂಸೆಯನ್ನು ಒಪ್ಪಲಾಗದು. ಶಾಂತಿ, ಒಗ್ಗಟ್ಟು ಹಾಗೂ ಅನ್ಯೋನ್ಯತೆ ದೇಶದ ಪ್ರಗತಿಗೆ ಪ್ರಮುಖವಾಗಿದೆ” ಎಂದರು.
ದೇಶದಲ್ಲಿ ನಡೆಯುತ್ತಿರುವ ಗೋರಕ್ಷಣೆಯ ಹೆಸರಿನ ಹಿಂಸೆಯ ಬಗ್ಗೆ ಈ ಹಿಂದೆಯೂ ಮೋದಿ ಮಾತನಾಡಿದ್ದರು. ಗೋರಕ್ಷಕರಿಗೆ ಎಚ್ಚರಿಕೆ ನೀಡಿದ್ದರು. ದೇಶದಲ್ಲಿ ಹೆಚ್ಚುತ್ತಿರುವ ಗೋಭಕ್ತಿಯ ಹಿಂಸೆಯ ಬಗ್ಗೆ ಮಾತನಾಡಿದ್ದ ಮಲ್ಲಿಕಾರ್ಜುನ ಖರ್ಗೆ ಇದು ಹಿಂದೂಸ್ತಾನ, ಇದನ್ನು ಹಿಂದೂಸ್ತಾನವಾಗಿಯೇ ಇರಲು ಬಿಡಿ, ‘ಲಿಂಚಿಸ್ತಾನ್’ ಮಾಡಬೇಡಿ’ ಎಂದಿದ್ದರು.
Next Story