ಉತ್ತರ ಪ್ರದೇಶ ಆರೋಗ್ಯ ಸಚಿವರ ವಿರುದ್ಧ ದೂರು ನೀಡಿದ ಮೃತ ಮಗುವಿನ ತಂದೆ
ಗೋರಖ್ ಪುರ ದುರಂತ
ಗೋರಖ್ ಪುರ, ಆ.15: ಇಲ್ಲಿನ ಬಿಆರ್ ಡಿ ಆಸ್ಪತ್ರೆಯಲ್ಲಿ ಸಂಭವಿಸಿದ್ದ ದುರಂತದಲ್ಲಿ ಮಗುವನ್ನು ಕಳೆದುಕೊಂಡ ತಂದೆಯೊಬ್ಬರು ಉತ್ತರ ಪ್ರದೇಶದ ಆರೋಗ್ಯ ಸಚಿವ, ವೈದ್ಯಕೀಯ ಶಿಕ್ಷಣ ಸಚಿವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
ರಾಜ್ ಭರ್ ಎಂಬವರು ದೂರು ನೀಡಿದ್ದು, ಇವರು ಬಿಹಾರದ ಗೋಪಾಲ್ ಗಂಜ್ ನಿವಾಸಿಯಾಗಿದ್ದು, ಆಗಸ್ಟ್ 10ರಂದು ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದರು ಎನ್ನಲಾಗಿದೆ.
ಆಕ್ಸಿಜನ್ ಪೂರೈಕೆ ಸ್ಥಗಿತದಿಂದ ತನ್ನ ಮಗು ಮೃತಪಟ್ಟಿರುವುದಾಗಿ ರಾಜ್ ಭರ್ ಹೇಳಿದ್ದು, ಈ ಘಟನೆಗೆ ಆರೋಗ್ಯ ಸಚಿವ ಸಿದ್ಧಾರ್ಥ್ ನಾಥ್ ಸಿಂಗ್, ವೈದ್ಯಕೀಯ ಶಿಕ್ಷಣ ಸಚಿವ ಅಶುತೋಷ್ ಟಂಡನ್ ಕಾರಣ ಎಂದು ಆರೋಪಿಸಿದ್ದಾರೆ. ಇಷ್ಟೇ ಅಲ್ಲದೆ ಮಗು ಮೃತಪಟ್ಟ ನಂತರ ಮರಣೋತ್ತರ ಪರೀಕ್ಷೆ ನಡೆಸಿಲ್ಲ ಎಂದಿದ್ದಾರೆ.
ಆಗಸ್ಟ್ 14ರಂದು ದೂರು ದಾಖಲಾಗಿದ್ದರೂ ಇದುವರೆಗೂ ಎಫ್ ಐಆರ್ ದಾಖಲಿಸಿಲ್ಲ ಎನ್ನಲಾಗಿದೆ.
Next Story