ಪಿಎಫ್ಐ ಅಂಗರಗುಂಡಿ: ಸ್ವಾತಂತ್ರ್ಯೋತ್ಸವ, ನೂತನ ಬಸ್ ತಂಗುದಾಣ ಉದ್ಘಾಟನೆ
ಮಂಗಳೂರು, ಆ. 16: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಅಂಗರಗುಂಡಿ ವಲಯದ ವತಿಯಿಂದ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮ ಹಾಗು ಎಸ್.ಡಿ.ಪಿ.ಐ. ಅಂಗರಗುಂಡಿ ವಲಯದ ವತಿಯಿಂದ ನೂತನವಾಗಿ ನಿರ್ಮಿಸಿದ ಶಹೀದ್ ಅಕ್ಬರ್ ಸ್ಮಾರಕ ಬಸ್ ತಂಗುದಾಣ ಉದ್ಘಾಟನಾ ಕಾರ್ಯಕ್ರಮ ಅಂಗರಗುಂಡಿ ಬಸ್ ನಿಲ್ದಾಣದ ಬಳಿ ನಡೆಯಿತು.
ಧ್ವಜಾರೋಹಣವನ್ನು ಬೈಕಂಪಾಡಿ ಮೊಹಿದ್ದೀನ್ ಜುಮಾ ಮಸೀದಿಯ ಖತೀಬ್ ಬಹು ಹೈದರಾಲಿ ಸಖಾಫಿ ಹಾಗು ಅಂಗರಗುಂಡಿ ಬದ್ರಿಯಾ ಮಸೀದಿಯ ಅಧ್ಯಕ್ಷ ಅಡ್ವಕೇಟ್ ಮುಖ್ತಾರ್ ಅಹ್ಮದ್ ನೆರವೇರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಪಿ.ಐ. ಮುಲ್ಕಿ ಮೂಡಬಿದಿರೆ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷರಾದ ಜಮಾಲ್ ಜೋಕಟ್ಟೆಯವರು ವಹಿಸಿದರು. ನೂತನವಾಗಿ ನಿರ್ಮಿಸಲಾದ 'ಶಹೀದ್ ಅಕ್ಬರ್ ಸ್ಮಾರಕ ಬಸ್ ತಂಗುದಾಣ'ವನ್ನು ಶಹೀದ್ ಅಕ್ಬರ್ ರವರ ತಂದೆ ಹಾಜಿ ಅಬ್ದುಲ್ ಖಾದರ್ ಹಾಜಿ ಲೋಕಾರ್ಪಣೆ ಮಾಡಿದರು.
ಶಾಫಿ ಅಂಗರಗುಂಡಿ ಮುಖ್ಯ ಭಾಷಣವನ್ನು ಮಾಡಿದರು. ಮುಖ್ಯ ಅತಿಥಿಗಳಾಗಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಅಂಗರಗುಂಡಿ ವಲಯದ ಸಿದ್ದೀಕ್ ಅಂಗರಗುಂಡಿ, ಎಸ್.ಡಿ.ಪಿ.ಐ. ಅಂಗರಗುಂಡಿ ಅಧ್ಯಕ್ಷರಾದ ಸಿದ್ದೀಕ್ ಅಂಗರಗುಂಡಿ, ಉದ್ಯಮಿ ಅಶ್ರಮಿ ದಾಚು, ಯುವ ನೇತಾರ ಬಾವ ಸಹೀದ್ ಉಪಸ್ಥಿತರಿದ್ದರು. ಅಲ್ಲದೇ ಊರಿನ ಸಾಮಾಜಿಕ ರಾಜಕೀಯ ನೇತಾರರು ನೂರಾರು ಮಂದಿ ನಾಗರಿಕರು, ಎಸ್.ಡಿ.ಪಿ.ಐ. ಅಂಗರಗುಂಡಿ ಹಾಗು ಎಸ್.ಡಿ.ಪಿ.ಐ. ಕಾರ್ಯಕರ್ತರು ಭಾಗವಹಿಸಿದರು.
ನಿಝಾಮ್ ಅಂಗರಗುಂಡಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.