ಎಸ್.ಎಸ್.ಎಫ್ ಕಾರ್ಯಗಾರ
ಚಿಕ್ಕಮಗಳೂರು, ಆ.16: ಕರ್ನಾಟಕ ರಾಜ್ಯ ಸನ್ನೀ ಸ್ಟೂಡೆಂಟ್ಸ್ ಫೆಟರೇಶನ್(ಎಸ್.ಎಸ್.ಎಫ್) ಚಿಕ್ಕಮಗಳೂರು ಡಿವಿಷನ್ ಮಟ್ಟದ ಕಾರ್ಯಗಾರವು ವಿಜಯಪುರದ ಅಲ್ ಬದ್ರಿಯಾ ಮಸೀದಿ ಸಭಾಂಗಣದಲ್ಲಿ ನಡೆಯಿತು.
ಎಸ್.ಎಸ್.ಎಫ್ ಪ್ರ.ಕಾರ್ಯದರ್ಶಿ ಕೆ.ಎಂ. ಸಿದೀಖ್ ಮೋಂಟುಗೋಳಿ ತರಗತಿ ನಡೆಸಿಕೊಟ್ಟರು. ಸುಮಾರು ಎಂಟು ಎಸ್.ಎಸ್.ಎಫ್ ಶಾಖೆಯ ಕಾರ್ಯಕರ್ತರು ಭಾಗವಹಿಸಿದ್ದ ಕಾರ್ಯಗಾರವನ್ನು ಎಸ್.ಎಸ್.ಎಫ್. ರಾಜ್ಯ ಸಮಿತಿ ಸದಸ್ಯ ಹುಸೈನ್ ಸಅದಿ ಹೊಸ್ಮಾರ್ ಉದ್ಘಾಟಿಸಿದರು, ಡಿವಿಷನ್ ಅಧ್ಯಕ್ಷ ರಫಿಖ್ ಸಖಾಫಿ ಅಧ್ಯಕ್ಷತೆ ವಹಿಸಿದ್ದರು.
ದೇಶ ಉಳಿಸಿ, ದ್ವೇಶ ಅಳಿಸಿ ಎಂಬ ಎಸ್.ಎಸ್.ಎಫ್ ಸ್ಲೋಗನ್ ಪ್ರಕಾರ ದೇಶವನ್ನು ಉಳಿಸಿ ಬೆಳೆಸಬೇಕೆಂದು ಕೆ.ಎಂ.ಸರ್ ಕರೆ ನೀಡಿದರು. ಡಿವಿಷನ್ ಕಾರ್ಯದರ್ಶಿ ಇರ್ಫಾನ್ ನಿರೂಪಿಸಿದರು.
Next Story