ಚಿಕ್ಕಬಳ್ಳಾಪುರ:ಯೋಧ ಮದನ್ ಲಾಲ್ ದಿಂಗ್ರಾ ಜನ್ಮ ದಿನಾಚರಣೆ
ಚಿಕ್ಕಬಳ್ಳಾಪುರ, ಆ.20: ನಗರದ ಹೊರವಲಯದಲ್ಲಿರುವ ನಾಗಾರ್ಜುನ ಇಂಜನೀಯರಿಂಗ್ ಕಾಲೇಜಿನಲ್ಲಿ ಎಬಿವಿಪಿ ವತಿಯಿಂದ ಸ್ವಾತಂತ್ರ್ಯ ಯೋಧ ಮದನ್ ಲಾಲ್ ದಿಂಗ್ರಾ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಸಸಿ ನೆಡುವ ಮೂಲಕ ಆಚರಿಸಲಾಯಿತು.
ಈ ವೇಳೆ ಪ್ರಾಂಶುಪಾಲ ಡಾ. ಗೋಪಾಲಕೃಷ್ಣ ಮಾತನಾಡಿ, ದೇಶವನ್ನು ಬ್ರಿಟೀಷರ ದಾಸ್ಯದಿಂದ ಮುಕ್ತಿ ಗೊಳಿಸಲು ತ್ಯಾಗ ಬಲಿದಾನ ಮಾಡಿದವರ ಸಾಲಿನಲ್ಲಿ ಅಗ್ರ ಪಂಕ್ತಿಯಲ್ಲಿನ ಹೆಸರು ಮದನ್ ಲಾಲ್ ದಿಂಗ್ರಾ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯಸ್ಥ ಕಪಿಲ್, ಎಬಿವಿಪಿ ವಿಭಾಗ ಸಂಚಾಲಕ ಮಂಜುನಾಥ ರೆಡ್ಡಿ, ವಿಜಯ್ ಅಖಿಲ್, ಸುಜಾತ, ಜಾನಕಿ, ಶರಣ್ಯ ಮತ್ತಿತರರು ಉಪಸ್ಥಿ ತರಿದ್ದರು.
Next Story