ಅಲ್ ಮದೀನಾ ಜುಬೈಲ್ ಕಮಿಟಿಯ ವಾರ್ಷಿಕ ಮಹಾಸಭೆ
ಜುಬೈಲ್, ಸೆ. 30: ಅಲ್ ಮದೀನ ಇಸ್ಲಾಮಿಕ್ ಕಾಂಪ್ಲೆಕ್ಸ್ ಮಂಜನಾಡಿ ದಮ್ಮಾಮ್ ವಲಯ ಇದರ ಅದೀನದ ಜುಬೈಲ್ ಘಟಕದ ಮಹಾಸಭೆಯು ಇತ್ತೀಚೆಗೆ ಜುಬೈಲ್ ಕೆಸಿಎಫ್ ಹಾಲ್ ನಲ್ಲಿ ಸಂಶುದ್ದೀನ್ ಸಅದಿ ಅಧ್ಯಕ್ಷತೆಯಲ್ಲಿ ಜರಗಿತು.
ಸಮಾರಂಭದಲ್ಲಿ ಹನೀಫ್ ಸಅದಿ ಪ್ರಾರ್ಥನೆಯೊಂದಿಗೆ ಆರಂಭಿಸಿ, ಅಲ್ ಮದೀನಾ ಓರ್ಗನೈಸರ್ ಅಬೂಬಕರ್ ಮುಸ್ಲಿಯಾರ್ ಸಭೆಯನ್ನು ಉದ್ಘಾಟಿಸಿದರು. ಫಯಾಝ್ ಪಕ್ಷಿಕೆರೆ ವಾರ್ಷಿಕ ವರದಿ ವಾಚಿಸಿ, ಮೂಸ ಹಾಜಿ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು.
ವಲಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಮಲ್ಲೂರ್ ಚುಣಾವನಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಈ ಸಂದರ್ಭ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಗೌರವಾಧ್ಯಕ್ಷರಾಗಿ ಶಂಸುದ್ದೀನ್ ಸಅದಿ,ಅಧ್ಯಕ್ಷರಾಗಿ ಮೂಸ ಹಾಜಿ ಕಿನ್ಯ, ಉಪಾಧ್ಯಕ್ಷರಾಗಿ ರಶೀದ್ ವಳವೂರ್, ಅನ್ವರ್ ಪಡುಬಿದ್ರೆ, ಪ್ರ. ಕಾರ್ಯದರ್ಶಿಯಾಗಿ ಇಬ್ರಾಹೀಂ ಪಡಿಕ್ಕಲ್, ಜೊತೆ ಕಾರ್ಯದರ್ಶಿಯಾಗಿ ಹಸೈನಾರ್ ಝುಹ್ರಿ, ಇಕ್ಬಾಲ್ ಕಲ್ಕಟ್ಟ, ಕೋಶಾಧಿಕಾರಿಯಾಗಿ ಉಸ್ಮಾನ್ ಝುಹ್ರಿ, ಸಂಘಟನಾ ಕಾರ್ಯದರ್ಶಿಯಾಗಿ ಫಯಾಝ್ ಪಕ್ಷಿಕೆರೆ, ಸಲಹೆಗಾರರಾಗಿ ಗಫೂರ್ ಸಜಿಪ ಹಾಗೂ 24 ಮಂದಿ ಕಾರ್ಯಾಕಾರಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ವೇದಿಕೆಯಲ್ಲಿ ವಲಯಾಧ್ಯಕ್ಷ ಇಝ್ಝುದ್ದೀನ್ ಮುಸ್ಲಿಯಾರ್, ಹಿರಿಯರಾದ ಎನ್ ಎಸ್ ಅಬ್ದುಲ್ಲಾ, ಗಫೂರ್ ಸಜಿಪ ಮಾತನಾಡಿದರು. ವಲಯ ಗೌರವಾಧ್ಯಕ್ಷ ಬಶೀರ್ ತೋಟಾಲ್, ಕಾಸಿಂ ಹಾಜಿ ಅಡ್ಡೂರ್, ಕಾದರ್ ಕಟ್ಟೆಮಾರ್, ರಿಸೀವರ್ ನಯೀಮಿ ಉಪಸ್ಥಿತರಿದ್ದರು.
ಇಬ್ರಾಹೀಂ ಪಡಿಕ್ಕಲ್ ಸ್ವಾಗತಿಸಿ, ಅನ್ವರ್ ಪಡುಬಿದ್ರೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.