ಪ್ರಸನ್ನರ ಹೋರಾಟಕ್ಕೆ ಬೆಂಬಲ ಸಿಗಲಿ
ಮಾನ್ಯರೆ,
ಕೈ ಉತ್ಪನ್ನಗಳನ್ನು ಜಿ.ಎಸ್.ಟಿ. ವ್ಯಾಪ್ತಿಯಿಂದ ಹೊರಗಿರಿಸಬೇಕೆಂದು ಒತ್ತಾಯಿಸಿ ಪ್ರಸನ್ನ ಅವರು ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದ್ದಾರೆ. ದೇಶವನ್ನು ಸಬಲಗೊಳಿಸಲು ಬಯಸುವವರು ಇದಕ್ಕೆ ಬೆಂಬಲವನ್ನು ನೀಡಬೇಕು. ಇದು ಮನುಷ್ಯರಿಗೆ ಬದುಕಿಕೊಳ್ಳಲು ಕೊಡುವ ಅವಕಾಶವಷ್ಟೆ ಅಲ್ಲ, ಭಾರತದ ಕರಕುಶಲ ಕೈಗಾರಿಕೆಯನ್ನು ನಾಶ ಮಾಡಿದ ಬ್ರಿಟಿಷ್ ಮತ್ತು ಬ್ರಿಟಿಷ್ ಮಾದರಿ ಉದ್ಯಮಗಳ ಎದುರು ದೇಶೀಯತೆಯ ಬಲಗೊಳಿಸುವಿಕೆಯ ಅಗತ್ಯವೂ ಹೌದು. ಗಾಂಧಿ ತತ್ವಗಳ ಗೆಲುವಿಗೆ ಅಗತ್ಯವೂ ಹೌದು.
Next Story