ಪ್ರವಾಸಿಗರೊಂದಿಗೆ ಸೌಜನ್ಯದಿಂದ ವರ್ತಿಸಿ: ಪಿಎಸೈ ಶಕ್ತಿವೇಲು
ಬಣಕಲ್, ಅ.17: ಹೊಟೇಲ್ ಮಾಲಕರು ಪ್ರವಾಸಿಗರಿಗೆ ಮತ್ತು ಸ್ಥಳೀಯರಿಗೆ ಬೇರೆ ಬೇರೆ ದರ ಪಡೆದು ತಾರತಮ್ಯದ ವ್ಯಾಪಾರ ನಡೆಸಬಾರದು. ಪ್ರವಾಸಿಗರ ಜೊತೆ ಸೌಜನ್ಯದಿಂದ ವರ್ತಿಸಬೇಕು. ಪ್ರವಾಸಿಗರಿಗೆ ದೌರ್ಜನ್ಯ ಎಸಗದ ದೂರು ಕಂಡು ಬಂದರೆ ಅಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಬಣಕಲ್ ಪಿಎಸೈ ಶಕ್ತಿವೇಲು ಎಚ್ಚರಿಕೆ ನಿಡಿದ್ದಾರೆ.
ತರುವೆ ಗ್ರಾಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ವರ್ತಕರ ಸಭೆಯಲ್ಲಿ ಭಾಗವಹಸಿ ಮಾತನಾಡಿದ ಅವರು, ಕಡ್ಡಾಯವಾಗಿ ತಿಂಡಿಯ ದರಪಟ್ಟಿಯಲ್ಲಿರುವಷ್ಟೇ ಪ್ರವಾಸಿಗರಿಂದ ಬಿಲ್ ತೆಗೆದುಕೊಳ್ಳಬೇಕು. ಕೊಟ್ಟಿಗೆಹಾರ, ಬಣಕಲ್ನಲ್ಲಿ ಸಂಚಾರ ದಟ್ಟಣೆಯ ಅವ್ಯವಸ್ಥೆಯಿದ್ದು, ಇದನ್ನು ತೆರವುಗೊಳಿಸಬೇಕು. ಅಲ್ಲದೆ, ವರ್ತಕರು ಕೊಟ್ಟಿಗೆಹಾರದಲ್ಲಿ ರಸ್ತೆಗೆ ತಾಗುವಂತೆ ನಾಮಫಲಕಗಳನ್ನು ಹಾಕಿ ಸಂಚಾರಕ್ಕೆ ಅಡ್ಡಿ ಪಡಿಸಬಾರದು ಎಂದು ಸೂಚಿಸಿದರು.
ಈ ವೇಳೆ ತರುವೆ ಗ್ರಾಪಂ ಮಾಜಿ ಅಧ್ಯಕ್ಷ ಬಿ.ಎಂ.ಭರತ್, ಸಂಘದ ಕಾರ್ಯಧರ್ಶಿ ವೇಣುಗೋಪಾಲ್ ಪೈ, ವರ್ತಕರ ಸಂಘದ ಖಜಾಂಚಿ ಎ.ಆರ್.ಲೋಬೊ ಮತ್ತಿತರರು ಮಾತನಾಡಿದರು. ಆರ್ಟಿಐ ಕಾರ್ಯಕರ್ತ ಪ್ರಭಾಕರ್ ಬಿನ್ನಡಿ, ಅಬ್ದುಲ್ ರೆಹಮಾನ್, ಪ್ರೆಡ್ರಿಕ್ ಡಿಸೋಜ, ಮೂರ್ತಿ, ಲಿಂಗರಾಜು, ಯೂಸುಫ್, ಟಿ.ಎ.ಖಾದರ್, ಮೊಯಿದಿನ್ ವರ್ತಕರ ಸಮಸ್ಯೆಗಳ ಬಗ್ಗೆ ವಿವರಿಸಿದರು ಮತ್ತು ವಿವಿಧ ಬಗೆಯ ಸಲಹೆ, ಸೂಚನೆಗಳನ್ನು ನೀಡಿದರು.
ಸಭೆಯ ಅಧ್ಯಕ್ಷತೆಯನ್ನು ತರುವೆ ಗ್ರಾಪಂ ಅಧ್ಯಕ್ಷೆ ರವಿಕಲಾ ಪೈ ವಹಿಸಿದ್ದರು. ತರುವೆ ಗ್ರಾಪಂ ಪಿಡಿಒ ಕವೀಶ್, ಉಪಾಧ್ಯಕ್ಷ ಬಿ.ಆರ್.ರಮೇಶ್, ಗ್ರಾಪಂ ಸದಸ್ಯ ಟ.ಎಂ.ಮಹೇಶ್, ಪದ್ಮಾ, ಲಲಿತಾ, ಗೆಳೆಯರ ಬಳಗದ ಅಧ್ಯಕ್ಷ ಎ.ಆರ್.ಅಭಿಲಾಷ್, ಆರೋಗ್ಯ ಸಹಾಯಕಿ ಮಂಜುಳಾ, ವರ್ತಕ ಸಂತೋಷ್, ಸಿಲ್ವೆಸ್ಟರ್ಪಿರೇರಾ, ಟಿ.ಎಂ.ನರೇಂದ್ರ, ಎಎಸೈ ಶಶಿ, ರುದ್ರೇಶ್, ಸಂದೀಪ್, ವಸಂತ್ಶೆಟ್ಟಿ, ಬೇಬಿ ಪಿ.ಜಿ, ಪ್ರವೀಣ್, ರಮೇಶ್, ಚಂದ್ರಕಲ ಮತ್ತಿತರರಿದ್ದರು.