ಒಕ್ಕಲಿಗರ ಸಮುದಾಯ ಭವನ ಕಾಮಗಾರಿ ಸ್ಥಳಕ್ಕೆ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಭೇಟಿ, ಪರಿಶೀಲನೆ
ಹೊನ್ನಾವರ, ಅ.19: ತಾಲೂಕಿನ ಕೆಳಗಿನೂರು ಹೊಳ್ಳಾಕುಳಿಯಲ್ಲಿ ನಿರ್ಮಾಣಗೊಳ್ಳಲಿರುವ ಒಕ್ಕಲಿಗರ ಸಮುದಾಯ ಸಭಾಭವನ ಕಾಮಗಾರಿ ನಡೆಯುವ ಸ್ಥಳಕ್ಕೆ ಕೇಂದ್ರ ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮಶೀಲ ಸಚಿವ ಅನಂತಕುಮಾರ ಹೆಗಡೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಸ್ಥಳೀಯ ಒಕ್ಕಲಿಗ ಮುಖಂಡರೊಂದಿಗೆ ಮಾತನಾಡಿದ ಅನಂತಕುಮಾರ ಹೆಗಡೆ, ಕೇಂದ್ರ ಸರಕಾರದಿಂದ ಸಮುದಾಯ ಭವನಕ್ಕೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಒಕ್ಕಲಿಗರ ಸಂಘಟನೆಯ ವತಿಯಿಂದ ಕೇಂದ್ರ ಸಚಿವರಿಗೆ ಗೌರವಾರ್ಪಣೆ ಇದೇ ವೇಳೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಎಮ್.ಎಚ್.ಗೌಡ, ಶಂಭು ಗೌಡ, ತಾ.ಪಂ ಸದಸ್ಯ ಗಣಪಯ್ಯ ಗೌಡ, ಚಿತ್ತಾರ ಗ್ರಾ.ಪಂ ಉಪಾಧ್ಯಕ್ಷ ಗಣಪತಿ ಗೌಡ ಚಿತ್ತಾರ, ಬಿಜೆಪಿ ತಾ. ಅಧ್ಯಕ್ಷ ಸುಬ್ರಾಯ ನಾಯ್ಕ ಮಂಕಿ, ಬಿಜೆಪಿ ಮುಖಂಡರಾದ ಸುನೀಲ್ ನಾಯ್ಕ, ಉಮೇಶ ನಾಯ್ಕ, ವಿನೋದ ನಾಯ್ಕ ಉಪಸ್ಥಿತರಿದ್ದರು.
Next Story