ಬೆಂಗ್ರೆಯಲ್ಲಿ ಜಲ್ಸತುನ್ನೂರು ಸ್ವಲಾತ್ ಕಾರ್ಯಕ್ರಮ
ಮಂಗಳೂರು, ಅ.19: ಮರ್ಕಝುನ್ನೂರ್ ಎಜುಕೇಶನಲ್ ಸೆಂಟರ್ ಬೆಂಗರೆ ಇದರ ಅಧೀನದಲ್ಲಿ ಪ್ರತಿ ತಿಂಗಳು ನಡೆಸಲ್ಪಡುವ ಜಲ್ಸತುನ್ನೂರ್ ಸ್ವಲಾತ್ ಮಜ್ಲಿಸ್ ಮತ್ತು ಸನ್ಮಾನ ಕಾರ್ಯಕ್ರಮವು ಬೆಂಗರೆಯ ದಾರುಶ್ಶಿಫಾ ವಠಾರದಲ್ಲಿ ಜಲಾಲ್ ಜಮಲುಲ್ಲೈಲ್ ತಂಙಳ್ರ ಅಧ್ಯಕ್ಷತೆಯಲ್ಲಿ ನಡೆಯಿತು.
ಉಮರ್ ಸಖಾಫಿ ತೆಲಕ್ಕಿ ಮುಖ್ಯ ಭಾಷಣ ಮಾಡಿದರು. ಈ ಸಂದರ್ಭ ಬೆಂಗರೆ ಮುಹಿಯ್ಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಮುಹಮ್ಮದ್ ಅಸ್ಲಮ್ ಅವರನ್ನು ಸನ್ಮಾನಿಸಲಾಯಿತು. ಅಲ್ಲದೆ ಮರ್ಕಜುನ್ನೂರ್ ಸುನ್ನಿ ಮದ್ರಸದ ವಿದ್ಯಾರ್ಥಿನಿಯರಿಗೆ ಉಚಿತ ಬುಖಾ ವಿತರಿಸಲಾಯಿತು. ವೇದಿಕೆಯಲ್ಲಿ ಎಂಜೆಎಂ ಉಪಾಧ್ಯಕ್ಷ ಇಸ್ಮಾಯೀಲ್ ಹಾಜಿ, ಕೆ.ಎ.ಬಶೀರ್ ಮದನಿ ಕೂಳೂರು ಮತ್ತಿತರಿದ್ದರು.
ಬಿ.ಎ. ಹಮೀದ್ ಸ್ವಾಗತಿಸಿ, ವಂದಿಸಿದರು.
Next Story