ಎಸ್ಐಒ ಉಳ್ಳಾಲ ವತಿಯಿಂದ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ
ಉಳ್ಳಾಲ, ಅ. 19: 'ಹಲವು ಧರ್ಮ ಒಂದು ಭಾರತ' ಎಂಬ ವಿಷಯದಲ್ಲಿ ಎಸ್ಐಒ ಕರ್ನಾಟಕ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಅಭಿಯಾನದ ಪ್ರಯುಕ್ತ ಯಾನೆಪೊಯ ಆಸ್ಪತ್ರೆ ದೆರಳಕಟ್ಟೆಯಲ್ಲಿ ಇಂದು ಎಸ್ಐಒ ಸ್ಥಾಪಕ ದಿನಾಚರಣೆಯ ಭಾಗವಾಗಿ ಬೆಳಗ್ಗೆ 8 ಗಂಟೆಗೆ ಎಸ್ಐಒ ಉಳ್ಳಾಲ ವತಿಯಿಂದ ರೋಗಿ ಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.
ಹಣ್ಣು ಹಂಪಲು ಹಂಚುವ ಮೂಲಕ ಸಮಾಜ ಸೇವಾ ಘಟಕ ಉಳ್ಳಾಲದ ಅಧ್ಯಕ್ಷ ಸಿ.ಎಚ್. ಸಲಾಮ್ ಮತ್ತು ಸಿಬ್ಬಂದಿ ವರ್ಗದ ನಾಗೆಶ್ ಕುಮಾರ್, ಎಸ್ಐಒ ಉಳ್ಳಾಲ ಘಟಕದ ಅಧ್ಯಕ್ಷ ಅಶೀರುದ್ದೀನ್ ಆಲಿಯಾ ಉದ್ಘಾಟನೆ ನೆರೆವೇರಿಸಿದರು.
ನಂತರ ಎಸ್ಐಒ ಉಳ್ಳಾಲದ ಕಾರ್ಯಕರ್ತರು ಎಲ್ಲಾ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದರು ಮತ್ತು ಸಿಬ್ಬಂದಿ ವರ್ಗದಲ್ಲಿ 'ಹಲವು ಧರ್ಮ ಒಂದು ಭಾರತ' ಅಭಿಯಾನದ ಸಂದೇಶಗಳನ್ನು ತಿಳಿಸಲಾಯಿತು. ಜಿಲ್ಲಾ ಕಾರ್ಯದರ್ಶಿ ನಿಝಾಮ್ ಮತ್ತು ಅನಿವಾಸಿ ಹುಸೈನ್ ಉಳ್ಳಾಲ್ ಸಹಕರಿಸಿದರು
Next Story