ಮಕ್ಕಳ ಪ್ರತಿಭೋತ್ಸವ: ಬಹುಮಾನ ವಿತರಣೆ
ಉಡುಪಿ, ಅ.20: ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಷನ್ ಆಫ್ ಇಂಡಿಯಾ ಉಡುಪಿ ಶಾಖೆಯ ವತಿಯಿಂದ ಇತ್ತೀಚೆಗೆ ಉಡುಪಿಯ ಜಾಮಿಯಾ ಮಸೀದಿಯಲ್ಲಿ ಮಕ್ಕಳಿಗಾಗಿ ಏರ್ಪಡಿಸಲಾದ ವಿವಿಧ ಸ್ಪರ್ಧೆಯ ವಿಜೇತರಿಗೆ ಪ್ರತಿಭಾ ಪುರಸ್ಕಾರವನ್ನು ಉಡುಪಿಯ ಬ್ರಹ್ಮಗಿರಲ್ಲಿರುವ ಲಯನ್ಸ್ ಭವನದಲ್ಲಿ ಅ.17ರಂದು ವಿತರಿಸಲಾಯಿತು.
ಮುಖ್ಯ ಅತಿಥಿಯಾಗಿ ಎಸ್ಐಓ ಕರ್ನಾಟಕ ರಾಜ್ಯಾಧ್ಯಕ್ಷ ಮುಹಮ್ಮದ್ ರಫೀಕ್ ಪುರಸ್ಕಾರ ವಿತರಿಸಿದರು. ಇಸ್ಲಾಮಿಕ್ ಚಿಲ್ಡ್ರನ್ಸ್ ಸರ್ಕಲ್ನ ರಾಜ್ಯ ಸಂಚಾಲಕ ರಫೀಕ್ ಮುಬೀನ್ ದಿಕ್ಸೂಚಿ ಭಾಷಣ ಮಾಡಿದರು. ಕಳೆದ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು, ಕರಾಟೆ ಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಮಹಮ್ಮದ್ ಸಾದ್ ಮತ್ತು ಚಿತ್ರಕಲೆಯ ಪ್ರತಿಭಾವಂತ ಫವಾಝ್ ತೀರ್ಥಹಳ್ಳಿ ಅವರನ್ನು ಸನ್ಮಾನಿಸಲಾಯಿತು.
ಎಚ್ಆರ್ಎಸ್ನ ರಾಜ್ಯ ಕಾರ್ಯದರ್ಶಿ ಮಹಮ್ಮದ್ ಮರಕಡ, ಜಮಾ ಅತೆ ಇಸ್ಲಾಮೀ ಹಿಂದ್ ಉಡುಪಿ ಶಾಖೆಯ ಅಧ್ಯಕ್ಷ ಡಾ.ಅಬ್ದುಲ್ ಅಝೀಝ್, ಎಸ್ಐಓ ಸ್ಥಾನಿಯ ಶಾಖೆಯ ಅದ್ಯಕ್ಷ ಮಹಮ್ಮದ್ ಶಾರೂಕ್ ತೀರ್ಥಹಳ್ಳಿ, ಐಸಿಸಿಯ ಅಧ್ಯಕ್ಷ ತಾಹ ಉಪಸ್ಥಿತರಿದ್ದರು. ಯಾಸೀನ್ ಮನ್ನ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.