ಲಿಫ್ಟ್ ಕುಸಿದು ಕಾರ್ಮಿಕ ಮೃತ್ಯು
ಬೆಂಗಳೂರು, ಅ.20: ಲಿಫ್ಟ್ ಕುಸಿದು ಕೂಲಿ ಕಾರ್ಮಿಕನೊಬ್ಬ ಮೃತಪಟ್ಟಿರುವ ಘಟನೆ ಇಲ್ಲಿನ ಕೆಪಿ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ಬಾಳೇಕಾಯಿ ಮಂಡಿ ಬಳಿಯ ಇಟಾ ಮಾಲ್ನಲ್ಲಿ ಲಿಫ್ಟ್ ಕುಸಿದು ಕೂಲಿ ಕಾರ್ಮಿಕ ಶ್ರೀನಿವಾಸ್ ಮೃತಪಟ್ಟಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಶುಕ್ರವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಶ್ರೀನಿವಾಸ್ ಅವರು ಇತರ ನಾಲ್ವರೊಂದಿಗೆ ವಸ್ತುಗಳನ್ನು ಹಾಕಿಕೊಂಡು ಲಿಫ್ಟ್ನಲ್ಲಿ ಇಳಿಯುತ್ತಿದ್ದಾಗ ಲಿಫ್ಟ್ ಏಕಾಏಕಿ ಸ್ಥಗಿತಗೊಂಡಿದೆ. ಕೂಡಲೇ ಅದರಲ್ಲಿನ ಬಟನ್ ಒತ್ತಲು ಹೋದಾಗ ಲಿಫ್ಟ್ ಕುಸಿದು ಅದರಲ್ಲಿ ಸಿಕ್ಕಿ ಹಾಕಿಕೊಂಡಿದ್ದ ನಾಲ್ವರನ್ನು ರಕ್ಷಿಸಲಾಯಿತಾದರೂ ಶ್ರೀನಿವಾಸ್ ಉಸಿರು ಕಟ್ಟಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಈ ಸಂಬಂಧ ಮೊಕದ್ದಮೆ ದಾಖಲಿಸಿಕೊಂಡಿರುವ ಕೆಪಿ ಅಗ್ರಹಾರ ಠಾಣಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Next Story