'ನಮ್ಮ ಬಂಟ್ವಾಳ ಡಾಟ್ಕಾಮ್' ವೆಬ್ ಸೈಟ್ ಗೆ ಚಾಲನೆ
ಬಂಟ್ವಾಳ, ಅ. 20: ನಮ್ಮ ಬಂಟ್ವಾಳ ಸಮೂಹ ಸಂಸ್ಥೆಯ ನೂತನ 'ನಮ್ಮ ಬಂಟ್ವಾಳ ಡಾಟ್ಕಾಮ್' ವೆಬ್ ಸೈಟ್ನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಿದರು.
ನಂತರ ನೂತನ ಜಾಲ ತಾಣವನ್ನು ಚಾಲನೆಗೊಳಿಸಿ ಮಾತನಾಡಿದ ಅವರು, ಸಾಮಾಜಿಕ ವ್ಯವಸ್ಥೆಗಳನ್ನು ಸುಧಾರಣೆ ಮಾಡುವಂತಹ ಜವಾಬ್ದಾರಿ ಮಾಧ್ಯಮಗಳಿವೆ. ಈ ನಿಟ್ಟಿನಲ್ಲಿ ನಮ್ಮ ಬಂಟ್ವಾಳ ಡಾಟ್ಕಾಮ್ ಉತ್ತಮವಾಗಿ ಕಾರ್ಯನಿರ್ವಹಿಸುವಂತಾಗಲಿ. ಅಬೀವೃದ್ಧಿಗೆ ಸಾಮಾಜಿಕ ಜಾಲತಾಣಗಳ ಅವಶ್ಯಕತೆ ಇದೆ ಎಂದರು.
ಪ್ರಗತಿ ಪರ ಕೃಷಿಕ, ಬಿಜೆಪಿ ಮುಖಂಡ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ನಮ್ಮ ಬಂಟ್ವಾಳ ಡಾಮ್ ಕಾಮ್ ವೆಬ್ಸೈಟ್ನ ಲೋಗೋ ಅನಾವರಣಗೊಳಿಸಿ ಮಾತನಾಡಿ, ತಾಜಾ ಹಾಗೂ ನೈಜ ಸುದ್ದಿಗಳು ಇಂದಿನ ಅವಶ್ಯಕತೆಯಾಗಿದೆ. ನಮ್ಮ ಬಂಟ್ವಾಳ ಡಾಟ್ಕಾಮ್ ಜನರಿಗೆ ಉತ್ತಮ ಸುದ್ದಿಗಳನ್ನು ನೀಡುವಲ್ಲಿ ಸಹಕರಿಸಬೇಕು ಎಂದು ಶುಭ ಹಾರೈಸಿದರು.
ಈ ಸಂದರ್ಭ ಜಿ.ಪಂ.ಸದಸ್ಯರಾದ ತುಂಗಪ್ಪ ಬಂಗೇರ, ಚಂದ್ರಪ್ರಕಾಶ್ ಶೆಟ್ಟಿ, ಪಿಯೂಸ್ ಎಲ್. ರೋಡ್ರಿಗಸ್, ಹರಿಕೃಷ್ಣ ಬಂಟ್ವಾಳ, ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ಬಂಟ್ವಾಳ ಪುರಸಭೆ ಅಧ್ಯಕ್ಷ ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮುಹಮ್ಮದ್ ನಂದರಬೆಟ್ಟು, ಸದಸ್ಯರಾದ ವಾಸು ಪೂಜಾರಿ, ಗಂಗಾಧರ್, ಓಂಪ್ರಸಾದ್, ವಿಶ್ವನಾಥ ಬಂಟ್ವಾಳ, ವಿಶ್ವನಾಥ ಪೂಜಾರಿ ಗಾಣದಪಡ್ಪು, ವೆಂಕಪ್ಪ ಪೂಜಾರಿ, ನಝೀರ್ ಮಠ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮೌನೇಶ್ ವಿಶ್ವಕರ್ಮ, ಯಶು ವಿಟ್ಲ, ಮಂಜು ವಿಟ್ಲ, ಪ್ರವೀಣ್ ಅಂಚನ್ ತುಪ್ಪೆಕಲ್ಲು, ಗೀತಾಂಜಲಿ ಪ್ರಶಾಂತ್ ಪುಂಜಾಲಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.
ಸಂಸ್ಥೆಯ ಮುಖ್ಯಸ್ಥ ಪ್ರಶಾಂತ್ ಪುಂಜಾಲಕಟ್ಟೆ ಸ್ವಾಗತಿಸಿದರು, ಶಿಕ್ಷಕ ರಾಮಚಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು.