ಅಲ್ ಖಮರ್ ವೆಲ್ಫೇರ್ ಅಸೋಸಿಯೇಶನ್ ಮೂಳೂರು: ದುಬೈ ಘಟಕದಿಂದ ಬಡ ರೋಗಿಗಳಿಗೆ ಚಿಕಿತ್ಸಾ ನೆರವು
ದುಬೈ, ಅ. 23: ಆರ್ಲಪದವಿನ ಮಹಿಳೆಯೋರ್ವರು ಮೂತ್ರಪಿಂಡ ಖಾಯಿಲೆಯಿಂದ ಬಳಲುತ್ತಿದ್ದು, ಅವರ ಕಿಡ್ನಿ ವಿನಿಮಯ ಹಾಗು ಚಿಕಿತ್ಸೆಗೆ ಆರ್ಥಿಕ ನೆರವು, ಹಾಗು ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಸುಮಾರು ಒಂದು ವರ್ಷಗಳಿಂದ ಮಣಿಪಾಲದ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿರುವ ತೀರಾ ಬಡತನದ ಉಡುಪಿ ಜಿಲ್ಲೆಯ ಇಂದ್ರಾಳಿ ನಿವಾಸಿ ಇಮ್ತಿಯಾಝ್ ಎಂಬವರ 2 ವರ್ಷದ ಮಗುವಿನ ಚಿಕಿತ್ಸೆಗಾಗಿ ಧನಸಹಾಯ ಮಾಡಿದೆ.
ಮೂಳೂರು ಜಮಾಅತಿನ ಉಸ್ತಾದರಾದ ಹೈದರ್ ಸಹಾನಿ ಇವರಿಗೆ ಮನೆ ಕಟ್ಟಲು ಧನ ಸಹಾಯ, ಮೂಳೂರಿನ ಸಹೋದರಿಯೊರ್ವರ ಮಗಳ ಮದುವೆಗೆ ಸಹಾಯ, ಹೀಗೆ ಹಲವಾರು ಬಡ ನಿರ್ಗತಿಕರಿಗೆ ಸಹಾಯ ಹಸ್ತವನ್ನು ನೀಡುವುದರೊಂದಿಗೆ ಸಮುದಾಯ ಹಾಗು ಸಮಾಜದ ಜನರ ಮನದಲ್ಲಿ 'ಅಲ್ ಖಮರ್ ವೆಲ್ಪೇರ್ ಅಸೋಸಿಯೇಷನ್ ಮೂಳೂರು' ಮನೆ ಮಾಡಿರುವುದಕ್ಕೆ ಹೆಮ್ಮೆ ಪಡುತ್ತೇವೆ.
Next Story