ಶಾಪಗ್ರಸ್ಥ ಹೆದ್ದಾರಿ
ಮಾನ್ಯರೆ,
ಪಡುಬಿದ್ರೆಯಲ್ಲಿ ಒಮ್ಮೆ ಸ್ಥಗಿತವಾಗಿದ್ದ ಹೆದ್ದಾರಿ ಕಾಮಗಾರಿ, ಕೆಲವು ತಿಂಗಳ ಹಿಂದೆ ಜೀವ ಪಡೆದುಕೊಂಡು ಇನ್ನು ಕೆಲವೇ ದಿನಗಳಲ್ಲಿ ಹೆದ್ದಾರಿ ಸರಿಯಾಗುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಈ ಕಾಮಗಾರಿ ಮತ್ತೆ ನಿಂತಿದ್ದು, ಮುಂದುವರಿಯುವ ಲಕ್ಷಣ ಗೋಚರಿಸುತ್ತಿಲ್ಲ.
ಈ ಸ್ಥಗಿತತೆಗೆ ಹಲವು ಸಾಬೂಬುಗಳನ್ನು ನೀಡುತ್ತಿದ್ದರೂ ಮತ್ತೆ ಈ ಕಾಮಗಾರಿಯ ಸುತ್ತ ರಾಜಕೀಯ ವಾಸನೆ ಹೊಡೆಯುತ್ತಿದೆ. ಪಡುಬಿದ್ರೆಯ ಶಾಪಗ್ರಸ್ಥ ಹೆದ್ದಾರಿಗೆ ಎಂದು ಮುಕ್ತಿ ದೊರಕೀತು?
Next Story