ದಾರುನ್ನೂರ್ ದುಬೈ ಸ್ಟೇಟ್ ಸಮಿತಿ ರಚನೆ: ನೂತನ ಪದಾಧಿಕಾರಿಗಳ ಆಯ್ಕೆ
ದುಬೈ, ನ.4: ದಾರುನ್ನೂರ್ ಎಜುಕೇಷನ್ ಸೆಂಟರ್ ಕಾಶಿಪಟ್ಣ ಮೂಡುಬಿದಿರೆ ಇದರ ಯು ಎ ಇ ರಾಷ್ಟ್ರೀಯ ಸಮಿತಿಯ ಅಧೀನದಲ್ಲಿನ ದುಬೈ ಸ್ಟೇಟ್ ಸಮಿತಿಯನ್ನು ಶುಕ್ರವಾರ ದೇರಾ ದುಬೈಯಲ್ಲಿರುವ ರಾಯಲ್ ಮಾರ್ಕ್ ಹೋಟೆಲ್ ಅಡಿಟೋರಿಯಮ್ ನಲ್ಲಿ ರಚಿಸಲಾಯಿತು
ದಾರುನ್ನೂರ್ ಕೇಂದ್ರ ಸಮಿತಿ ಸದಸ್ಯ ಸಲೀಂ ಅಲ್ತಾಫ್ ಫರಂಗಿಪೇಟೆ ಮತ್ತು ಬದ್ರುದ್ದೀನ್ ಹೆಂತಾರ್ ಸಮಿತಿ ರಚಿಸುವ ಜವಾಬ್ಧಾರಿಯನ್ನು ವಹಿಸಿಕೊಂಡರು. ಮಿತ್ತಬೈಲ್ ಶೈಖುನ ಜಬ್ಬಾರ್ ಉಸ್ತಾದ್ ಅವರ ಪುತ್ರ ಉಸ್ತಾದ್ ಇರ್ಶಾದ್ ಹುಸೈನ್ ಅಲ್ ಜಝೀರಿ, ಶಾರ್ಜಾ ಸಮಿತಿಯಿಂದ ಸಾಜಿದ್ ಬಜ್ಪೆ ಮೊದಲಾದವರು ಅತಿಥಿಗಳಾಗಿ ಉಪಸ್ಥಿತರಿದ್ದರು.
ದುಆದ ಬಳಿಕ ಸ್ವಾಗತ ಭಾಷಣವನ್ನು ಮುರಕ್ಕಾಬಾತ್ ಸಮಿತಿ ಅದ್ಯಕ್ಷ ಮಹಮ್ಮದ್ ರಫೀಕ್ ಆತೂರ್ ನೆರವೇರಿಸಿದರು. ಬಳಿಕ ಉದ್ಘಾಟನಾ ಕಾರ್ಯವನ್ನು ಉಸ್ತಾದ್ ಇರ್ಶಾದ್ ಹುಸೈನ್ ಅಲ್ ಜಝೀರಿ ನೆರವೇರಿಸಿ, ಮಾತನಾಡಿದರು.
ಬಳಿಕ ವ್ಯಕ್ತಿ ಪರಿಚಯವನ್ನು ಸಲೀಂ ಅಲ್ತಾಫ್ ಫರಂಗಿಪೇಟೆ ನೆರವೇರಿಸಿದರು. ದುಬೈಯನ್ನು ಕೇಂದ್ರವಾಗಿಟ್ಟು ಕಾರ್ಯಾಚರಿಸುತ್ತಿರುವ ದಾರುನ್ನೂರಿನ ವಿವಿಧ ಶಾಖೆಗಳಾದ ದೇರಾ ದುಬೈ, ಬರ್ ದುಬೈ, ಅಲ್ ಬರಾಹ, ಮುರಕ್ಕಾಬಾತ್ ,ಅಲ್ ಕಿಸೈಸ್, ಅಲ್ ನಕೀಲ್ , ಅಲ್ ಕೋಝ್ , ಅಲ್ ಕರಾಮ, ಹೋರ್ ಅಲ್ ಅಂಝ್ , ಅಲ್ ಸತ್ವಾ , ಜಾಫ್ಜಾ , ಇಂಟರ್ ನ್ಯಾಷನಲ್ ಸಿಟಿ ಹೀಗೆ 12 ಶಾಖೆಗಳಿಂದ ಆರಿಸಲ್ಪಟ್ಟ ಸದಸ್ಯರು ಆಗಮಿಸಿದ್ದರು. ಬಳಿಕ ನೂತನ ಸಮಿತಿ ರಚನೆಯ ಕಾರ್ಯವನ್ನು ಕೈಗೆತ್ತಿಕೊಳ್ಳಲಾಯಿತು.
ಗೌರವಾಧ್ಯಕ್ಷರಾಗಿ ಅಶ್ರಫ್ ಬಾಳೆಹೊನ್ನೂರು ಅಲ್ ನಖೀಲ್ ಗ್ರೂಪ್, ಅಧ್ಯಕ್ಷರಾಗಿ ಮಹಮ್ಮದ್ ರಫೀಕ್ ಆತೂರ್, ಉಪಾಧ್ಯಕ್ಷರುಗಳಾಗಿ ಶರೀಫ್ ಅಶ್ರಫಿ ಮೊಡಂತ್ಯಾರ್,
ಬಶೀರ್ ಕೆಮ್ಮಿಂಜೆ, ನವಾಝ್ ಮನಲ್, ಹಂಝ ಪುಣಚ, ನವಾಝ್ ಕೋಟೆಕಾರ್, ಪ್ರಧಾನ ಕಾರ್ಯದರ್ಶಿ ಉಸ್ಮಾನ್ ಕೆಮ್ಮಿಂಜೆ, ಕಾರ್ಯದರ್ಶಿಗಳಾಗಿ ಅಶ್ರಫ್ ಪರ್ಲಡ್ಕ, ಅಬ್ದುಲ್ ರಝಾಕ್ ಕರೈ, ಅಶ್ರಫ್ ಬಾಂಬಿಲ, ಸಿದ್ದೀಕ್ ಪಾಣೆಮಂಗಳೂರು, ಕೋಶಾಧಿಕಾರಿ ಹನೀಫ್ ಕೆ.ಪಿ ಮೂಡುಬಿದಿರೆ, ಸಹ ಕೋಶಾಧಿಕಾರಿ ನಾಸಿರ್ ಬಪ್ಪಳಿಗೆ, ಸಂಘಟನೆ ಕಾರ್ಯದರ್ಶಿ ಅನ್ಸಾಫ್ ಪಾತೂರ್, ಲೆಕ್ಕ ಪರಿಶೋಧಕ ಸಿರಾಜ್ ಬಿ.ಸಿ ರೋಡ್, ಸಹ ಲೆಕ್ಕ ಪರಿಶೋಧಕ ಅಝೀಝ್ ಬಜ್ಪೆ,
ಕನ್ವೀನರ್ ಗಳು ಸಮೀರ್ ಇಬ್ರಾಹಿಂ ಕಲ್ಲರೆ, ಇಲ್ಯಾಸ್ ಕಡಬ, ಅಬ್ಬಾಸ್ ಕೇಕುಡೆ, ಅಝೀಝ್ ಸೋಂಪಾಡಿ, ಶರೀಫ್ ಕಾವು, ಸಂಶುದ್ದೀನ್ ಅಬ್ದುಲ್ ಹಮೀದ್ ಮೂಡಬಿದ್ರಿ,
ಉಸ್ಮಾನ್ ಮರೀಲ್ಫಾ, ಫಾರೂಕ್ ಬಿ.ಸಿ ರೋಡ್, ಶರೀಫ್ ಕೊಡ್ನೀರ್ಯೂ, ಯೂಸುಫ್ ಈಶ್ವರಮಂಗಲ,
ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಮಹಮ್ಮದ್ ಮುಸ್ತಾಕ್ ಕದ್ರಿ, ಸಲೀಂ ಅಲ್ತಾಫ್ ಫರಂಗಿಪೇಟೆ, ಬದ್ರುದ್ದೀನ್ ಹೆಂತಾರ್, ಅಬ್ದುಲ್ ಸಲಾಂ ಬಪ್ಪಳಿಗೆ, ಸುಲೈಮಾನ್ ಮೌಲವಿ ಕಲ್ಲೆಗ, ಅಬ್ದುಲ್ ರಝಾಕ್ ಉಸ್ತಾದ್ ಪಾತೂರ್, ಇಫ್ತಿಕಾರ್ ಅಡ್ಯಾರ್ ಕಣ್ಣೂರ್, ಸಮದ್ ಪೊಯ್ಯತ್ತೆ ಬೈಲ್ , ಸಮೀರ್ ಕರಾಯ, ಅಝೀಝ್ ಪಾತೂರು, ಜಾಬಿರ್ ಬಪ್ಪಳಿಗೆ, ಜಾಸಿರ್ ಕಡಬ, ಸಾದಿಕ್ ಬಾಳಿಯೂರ್, ತಾಜುದ್ದೀನ್ ಆದೂರು, ಅರಿಫ್ ಗಡಿಯಾರ್, ರಿಝ್ವಾನ್ ಬಜ್ಪೆ, ಇಮ್ರಾನ್ ಮಜಿಲೋಡಿ, ಹನೀಫ್ ಎಡಪದವು, ನವಾಝ್ ಬಿ.ಸಿ ರೋಡ್ , ಶಾಹುಲ್ ಬಿ.ಸಿ ರೋಡ್, ರಿಫಾಯಿ ಗೂನಡ್ಕ, ತಾಹಿರ್ ಹೆಂತಾರ್ , ತಯ್ಯಿಬ್ ಹೆಂತಾರ್, ಆಸಿಫ್ ವಿಟ್ಲ, ಅಬ್ದುಲ್ ರಝಾಕ್ ಕೆಮ್ಮಿಂಜೆ, ನೂರ್ ಮಹಮ್ಮದ್ ನಿರ್ಕಜೆ, ಅಶ್ರಫ್ ಅರ್ತಿಕೆರೆ, ಶಾಫಿ ಉಸ್ತಾದ್ ಸುಳ್ಯ, ನವಾಝ್ ಕಕ್ಕಿಂಜೆ, ಅಬೂಬಕ್ಕರ್ ಸಿದ್ದೀಕ್ , ಸಂಶೀರ್ ಬಾಂಬಿಲ, ರಿಯಾಝ್ ಪಟ್ಟಾಡಿ, ಜವಾದ್ ಪೊಳಲಿ , ತಾಜುದ್ದೀನ್ ಬೈರಿಕಟ್ಟೆ, ಯೂನುಸ್ ಬಿ.ಸಿ ರೋಡ್ , ಶಾಫಿ ಕಾಸರಗೋಡ್, ಸನಾವುಲ್ಲ ಗಡಿಯಾರ್ ಆಯ್ಕೆಯಾದರು .
ಇಲ್ಯಾಸ್ ಕಡಬ ಕಾರ್ಯಕ್ರಮ ನಿರೂಪಿಸಿದರು.