ನಂತೂರು ಬಳಿ ಬೀದಿದೀಪ ಸರಿಪಡಿಸಿ
ಮಾನ್ಯರೆ,
ಸದ್ಯ ಮಂಗಳೂರಿನ ರಸ್ತೆಗಳು ಕಾಂಕ್ರಿಟೀಕರಣಗೊಂಡಿವೆ. ನಂತೂರು ಬಳಿಯೂ ರಸ್ತೆ ಅಗಲೀಕರಣ ನಡೆದಿದ್ದು ಅಗಲ ರಸ್ತೆಗಳಿಂದಾಗಿ ವಾಹನ ಸಂಚಾರ ಸುಗಮವಾಗಿದೆ.
ಆದರೆ ನಂತೂರಿನಿಂದ ಕೆಪಿಟಿಗೆ ಹೋಗುವ ಕಡೆ ಕೆಲವು ಬೀದಿದೀಪಗಳು ಉರಿಯುತ್ತಿಲ್ಲ. ಇದರಿಂದ ಈ ಪ್ರದೇಶದಲ್ಲಿ ರಾತ್ರಿ ಸಮಯದಲ್ಲಿ ಚಲಿಸಲು ಕಷ್ಟವಾಗುತ್ತಿದೆ. ರಸ್ತೆಗಳನ್ನು ಮೇಲ್ದರ್ಜೆಗೆ ಏರಿಸುವಾಗ ರಸ್ತೆ ವಿಭಜಕಗಳ ಮಧ್ಯೆ ಬೀದಿದೀಪಗಳನ್ನು ಅಳವಡಿಸಲಾಗುತ್ತದೆ. ನಂತೂರಿನಲ್ಲಿಯೂ ಅಳವಡಿಸಲಾಗಿದೆ ಆದರೆ ಅದು ಉರಿಯದೆ ಇರುವುದರಿಂದ ಸಮಸ್ಯೆಯಾಗಿದೆ. ಸಂಬಂಧಪಟ್ಟವರು ಈ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸಬೇಕೆಂದು ಮನವಿ.
Next Story