ಸಮ-ಬೆಸ: ದಿಲ್ಲಿ ಸರಕಾರ ಎನ್ಜಿಟಿಗೆ
ಹೊಸದಿಲ್ಲಿ, ನ. 13: ಸಮ-ಬೆಸ ವಾಹನ ಸಂಚಾರದ ಕುರಿತ ನವೆಂಬರ್ 11ರ ಆದೇಶಕ್ಕೆ ತಿದ್ದುಪಡಿ ಕೋರಿ ದಿಲ್ಲಿ ಸರಕಾರ ಸೋಮವಾರ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯನ್ನು ಸಂಪರ್ಕಿಸಿದೆ.
ಈ ಮನವಿಯನ್ನು ನಾಳೆ ವಿಚಾರಣೆ ನಡೆಸಲಾಗುವುದು ಎಂದು ಹಸಿರು ನ್ಯಾಯ ಮಂಡಳಿ ತಿಳಿಸಿದೆ.
ನವೆಂಬರ್ 13ರಿಂದ ಐದು ದಿನಗಳ ಕಾಲ ಸಮ-ಬೆಸ ವಾಹನ ಸಂಚಾರ ಯೋಜನೆ ಜಾರಿಗೊಳಿಸುವ ಎಎಪಿ ಸರಕಾರದ ನಿರ್ಧಾರಕ್ಕೆ ನವೆಂಬರ್ 11ರಂದು ಶರತ್ತುಬದ್ಧ ಅನುಮತಿ ನೀಡಿರುವ ರಾಷ್ಟ್ರೀಯ ಹಸಿರು ಮಂಡಳಿ, ಯಾವುದೇ ವ್ಯಕ್ತಿ, ಅಧಿಕಾರಿಗಳು ಹಾಗೂ ದ್ವಿಚಕ್ರ ವಾಹನಗಳಿಗೆ ವಿನಾಯತಿ ನೀಡಬಾರದು ಎಂದು ಆದೇಶಿಸಿತ್ತು.
Next Story