ಬೆಂಗಳೂರು ಎಫ್ ಸಿ ರಾಯಭಾರಿಯಾಗಿ ದ್ರಾವಿಡ್
ಬೆಂಗಳೂರು, ನ.14: ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್)ಆರಂಭವಾಗಲು ಸರಿಯಾಗಿ ಒಂದು ವಾರ ಬಾಕಿ ಇರುವಾಗಲೇ ಬೆಂಗಳೂರು ಫುಟ್ಬಾಲ್ ಕ್ಲಬ್ಗೆ ಲೆಜೆಂಡರಿ ಕ್ರಿಕೆಟಿಗ ಹಾಗೂ ಭಾರತದ ಮಾಜಿ ನಾಯಕ ರಾಹುಲ್ ದ್ರಾವಿಡ್ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ.
‘‘ಬೆಂಗಳೂರು ಎಫ್ಸಿಯ ರಾಯಭಾರಿ ಆಗಿರುವುದಕ್ಕೆ ಸಂತೋಷವಾಗುತ್ತಿದೆ. ಕಳೆದ ನಾಲ್ಕು ಋತುವಿನಲ್ಲಿ ಈ ತಂಡ ಉತ್ತಮ ಪ್ರದರ್ಶನ ನೀಡಿದೆ. ನಾನು ಕೂಡ ಬೆಂಗಳೂರಿನ ನಿವಾಸಿ. ಬಿಎಫ್ಸಿ ತಂಡಕ್ಕೆ ನಗರದ ಪ್ರತಿಕ್ರಿಯೆ ಅದ್ಭುತವಾದುದು. ಈ ಕ್ಲಬ್ಗೆ ದೊಡ್ಡ ಅಭಿಮಾನಿಗಳ ಬಳಗವಿದೆ. ಕ್ಲಬ್ನ ಇತಿಹಾಸದಲ್ಲಿ ಐಎಸ್ಎಲ್ ಹೊಸ ಅಧ್ಯಾಯವಾಗಿದೆ. ಬಿಎಫ್ಸಿ ಭಾಗವಾಗುವುದಕ್ಕೆ ನಾನು ಎದುರು ನೋಡುತ್ತಿದ್ದೇನೆ’’ ಎಂದು ದ್ರಾವಿಡ್ ಹೇಳಿದ್ದಾರೆ.
ಬೆಂಗಳೂರು ತಂಡ ನ.19 ರಂದು ಶ್ರೀಕಂಠೀರವ ಸ್ಟೇಡಿಯಂನಲ್ಲಿ ಮುಂಬೈ ಎಫ್ಸಿ ವಿರುದ್ಧ ಆಡುವ ಮೂಲಕ ಐಎಸ್ಎಲ್ನಲ್ಲಿ ತನ್ನ ಅಭಿಯಾನ ಆರಂಭಿಸಲಿದೆ.
Next Story