ಕೇಂದ್ರ ಸಚಿವ ಕಣ್ಣಂತಾನಂ ವಿರುದ್ಧ ಹರಿಹಾಯ್ದ ವೈದ್ಯೆ: ವಿಡಿಯೋ ವೈರಲ್
ವಿವಿಐಪಿ ಸಂಸ್ಕೃತಿಯಿಂದ ತಡವಾದ ವಿಮಾನ ಹಾರಾಟ
ಹೊಸದಿಲ್ಲಿ, ನ.22: ಕೇಂದ್ರ ಸಚಿವ ಅಲ್ಫೋನ್ಸ್ ಕಣ್ಣಂತಾನಂ ಆಗಮನದಿಂದಾಗಿ ವಿಮಾನ ತಡವಾದದ್ದಕ್ಕಾಗಿ ವೈದ್ಯೆಯೊಬ್ಬರು ಕೇಂದ್ರ ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಚಿಂತಾಜನಕ ಸ್ಥಿತಿಯಲ್ಲಿದ್ದ ರೋಗಿಯೊಬ್ಬರ ಚಿಕಿತ್ಸೆಗಾಗಿ ವೈದ್ಯೆ ಪಾಟ್ನಾಗೆ ತೆರಳಬೇಕಿತ್ತು. ಆದರೆ ಕೇಂದ್ರ ಸಚಿವರ ಆಗಮನದಿಂದಾಗಿ ವಿಮಾನ ಹಾರಾಟ ತಡವಾಯಿತು. ಇದರಿಂದಾಗಿ ಆಕ್ರೋಶಗೊಂಡ ವೈದ್ಯೆ ಎಲ್ಲರ ಮುಂದೆಯೇ ಕೇಂದ್ರ ಸಚಿವ ಅಲ್ಫೋನ್ಸ್ ರಿಗೆ ಬೈಯ್ದಿದ್ದಾರೆ. ಇಷ್ಟೇ ಅಲ್ಲದೆ ಇನ್ನು ಮುಂದೆ ವಿಮಾನ ಹಾರಾಟ ತಡವಾಗುವುದಿಲ್ಲ ಎಂದು ಬರೆದುಕೊಡಬೇಕೆಂದು ಒತ್ತಾಯಿಸಿದ್ದಾರೆ.
ಈ ಸಂದರ್ಭ ಮಹಿಳೆಯನ್ನು ಸಮಾಧಾನಪಡಿಸಲು ಮುಂದಾದ ವಿಮಾನ ನಿಲ್ದಾಣದ ಅಧಿಕಾರಿಗಳ ವಿರುದ್ಧವೂ ವೈದ್ಯೆ ಆಕ್ರೋಶ ವ್ಯಕ್ತಪಡಿಸಿದರು. “ಇನ್ನೊಂದು ವಿಮಾನ ತಡವಾಗುತ್ತದೆ ಎನ್ನುವ ಬಗ್ಗೆ ನನಗೆ ಯಾವುದೇ ಅರಿವಿರಲಿಲ್ಲ” ಎಂದು ಕಣ್ಣಂತಾನಂ ವೈದ್ಯೆಯನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದರು.
Next Story