ನಾಚಿಕೆಗೇಡು
ಮಾನ್ಯರೆ,
ಶಿರಾಡಿ ಘಾಟಿ 2ನೇ ಹಂತದ ಕಾಮಗಾರಿಗಾಗಿ ಜನವರಿಯಿಂದ 6 ತಿಂಗಳುಗಳ ಕಾಲ ಬಂದ್ ಆಗಲಿದೆಯೆಂದು ಮಾಧ್ಯಮಗಳು ವರದಿ ಮಾಡಿವೆ. ಈ ದಾರಿಯಲ್ಲಿ ಸಂಚರಿಸುತ್ತಿದ್ದ ಬೃಹತ್ ಗಾತ್ರದ ವಾಹನಗಳು ಇನ್ನು ಮುಂದೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಚರಿಸಲಿವೆೆ.
ಮೊದಲೇ ರಾಷ್ಟ್ರೀಯ ಹೆದ್ದಾರಿ 66 ಮಂಗಳೂರಿನ ವ್ಯಾಪ್ತಿಯಲ್ಲಿ ಕುಲಗೆಟ್ಟು ಹೋಗಿದೆ. ಉಡುಪಿಯ ಪಡುಬಿದ್ರೆಯಲ್ಲಂತೂ ಇನ್ನೂ ಕಾಮಗಾರಿ ಆರಂಭವಾಗುವ ಲಕ್ಷಣ ಗೋಚರಿಸುತ್ತಿಲ್ಲ. ಇನ್ನು ಬೃಹತ್ ಗಾತ್ರದ ವಾಹನಗಳು ಸಂಚರಿಸತೊಡಗಿದರೆ ರಸ್ತೆ ಬಳಕೆದಾರರು ಏದುಸಿರು ಬಿಡುವುದು ಖಂಡಿತ.
Next Story