ವಿಷಾದಕರ
ಮಾನ್ಯರೇ,
ಒಬ್ಬ ಜನಪ್ರತಿನಿಧಿಯಾಗಿದ್ದು ಕೊಂಡು ಮೊದಲು ಕಾನೂನು ಪಾಲಿಸಬೇಕಾದ ಸಂಸದರೇ ಕಾನೂನನ್ನು ಉಲ್ಲಂಘಿಸಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ಕಾನೂನು ರಕ್ಷಣೆಗಿರಿಸಿದ್ದ ಬ್ಯಾರಿಕೇಡನ್ನು ಉಲ್ಲಂಘಿಸಿ ಅದರ ಮೇಲೆಯೇ ಕಾರು ಚಲಾಯಿಸಿಕೊಂಡು ಹೋಗಿ ಆನಂತರ ತನ್ನದೇನೂ ತಪ್ಪಿಲ್ಲವೆಂದು ವಾದಿಸುತ್ತಿರುವುದು ವಿಷಾದಕರ.
ಅಲ್ಲದೆ ಅವರು ಮಾಡಿದ ತಪ್ಪನ್ನು ಅವರ ಪಕ್ಷದವರೆಲ್ಲರೂ ಸಮರ್ಥಿಸುವುದನ್ನು ನೋಡಿದರೆ ಈ ಕಾನೂನು ಕಾಯ್ದೆಯೆನ್ನುವುದು ಜನಸಾಮಾನ್ಯರಿಗೆ ಮಾತ್ರವೇ ಅನ್ವಯಿಸುತ್ತದೆಯೆಂದು ರಾಜಕಾರಣಿಗಳು ಅಂದುಕೊಂಡಂತಿದೆ.
Next Story