‘ದಕ್ಷಿಣ ಆಫ್ರಿಕದಲ್ಲಿ ಭಾರತಕ್ಕೆ ಸರಣಿ ಗೆಲ್ಲುವ ಅವಕಾಶ’
ಹೊಸದಿಲ್ಲಿ, ಡಿ.7: ‘‘ಮುಂದಿನ ತಿಂಗಳು ದಕ್ಷಿಣ ಆಫ್ರಿಕದಲ್ಲಿ ನಡೆಯಲಿರುವ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಭಾರತ ಕ್ರಿಕೆಟ್ ತಂಡಕ್ಕೆ ಚೊಚ್ಚಲ ಸರಣಿ ಜಯಿಸುವ ಉತ್ತಮ ಅವಕಾಶವಿದೆ’’ ಎಂದು ಮಾಜಿ ನಾಯಕ ರಾಹುಲ್ ದ್ರಾವಿಡ್ ಅಭಿಪ್ರಾಯಪಟ್ಟಿದ್ದಾರೆ.
ಭಾರತ-ದಕ್ಷಿಣ ಆಫ್ರಿಕ ನಡುವಿನ ಸರಣಿಯು ಜ.5 ರಿಂದ ಕೇಪ್ಟೌನ್ನಲ್ಲಿ ಆರಂಭವಾಗಲಿದೆ. ಸತತ 9 ಸರಣಿಗಳನ್ನು ಜಯಿಸಿರುವ ವಿಶ್ವದ ನಂ.1 ತಂಡ ಭಾರತವು ದಕ್ಷಿಣ ಆಫ್ರಿಕ ವಿರುದ್ಧ ಟೆಸ್ಟ್ ಸರಣಿಗೆ ಮೊದಲು ಕೇವಲ ಒಂದು ಅಭ್ಯಾಸ ಪಂದ್ಯ ಆಡಲಿದೆ. ‘‘ಈಗಿನ ತಂಡದ ಸಾಮರ್ಥ್ಯವನ್ನು ಗಮನಿಸಿದರೆ ಈ ಬಾರಿ ದಕ್ಷಿಣ ಆಫ್ರಿಕ ನೆಲದಲ್ಲಿ ಸರಣಿ ಜಯಿಸುವ ಉತ್ತಮ ಅವಕಾಶವಿದೆ. ನಾವು ಉತ್ತಮ ವೇಗದ ಬೌಲರ್ಗಳನ್ನು ಕಣಕ್ಕಿಳಿಸಬೇಕು. ಆಲ್ರೌಂಡರ್ ಹಾರ್ದಿಕ್ ಪಾಂಡ್ಯಗೆ ಅಗತ್ಯವಿದ್ದರೆ ಆಡುವ ಅವಕಾಶ ನೀಡಬೇಕು. ನಮ್ಮ ತಂಡದಲ್ಲಿ ಅಶ್ವಿನ್, ಜಡೇಜರಂತಹ ಸ್ಪಿನ್ನರ್ಗಳಿದ್ದಾರೆ’’ ಎಂದರು.
Next Story