ಕೊಳ್ಳೇಗಾಲ : ನಾಪತ್ತೆಯಾಗಿದ್ದ ಬಾಲಕನ ಮೃತದೇಹ ಪತ್ತೆ
ಕೊಳ್ಳೇಗಾಲ,ಡಿ.11:ನಾಪತ್ತೆಯಾಗಿದ್ದ ಬಾಲಕ ಕೆರೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಸೋಮವಾರ ಜರುಗಿದೆ.
ತಾಲ್ಲೂಕಿನ ತೆಳ್ಳನೂರು ಗ್ರಾಮದ ಮದನ್ಕುಮಾರ್(11) ಮೃತ ಬಾಲಕ.
ಇಕ್ಕಡಹಳ್ಳಿ ಗ್ರಾಮದ ತಾತ ಕೆಂಪಯ್ಯನ ಮನೆಯಲ್ಲಿ ಬಾಲಕ ವಾಸವಿದ್ದು, ಅಲ್ಲಿನ ಸರ್ಕಾರಿ ಶಾಲೆಯಲ್ಲಿ 6ನೇ ತರಗತಿ ವ್ಯಾಸಂಗ ಮಾಡುತ್ತಿದ್ದನು. ಇಕ್ಕಡಹಳ್ಳಿ ಗ್ರಾಮದಿಂದ ಸುಮಾರು 3 ಕಿ.ಮಿ. ಇರುವ ಮತ್ತಿಪುರ ಕೆರೆಯಲ್ಲಿ ಇಂದು ಬಾಲಕನ ಮೃತಹೇಹ ಪತ್ತೆಯಾಗಿದೆ.
ಶನಿವಾರ ಮಧ್ಯಾಹ್ನ ಶಾಲೆ ಮುಗಿಸಿ ಮನೆಗೆ ಬಂದಿದ್ದ ಹುಡುಗ ಮನೆಯ ಅಕ್ಕಪಕ್ಕದ ಹುಡುಗರ ಜೊತೆಯಲ್ಲಿ ಆಟವಾಡಲು ಹೋಗಿ ಕಾಣೆಯಾಗಿರುವುದಾಗಿ ಗ್ರಾಮಾಂತರ ಠಾಣೆಯಲ್ಲಿ ರವಿವಾರ ಸಂಜೆ ದೂರು ದಾಖಲಾಗಿತ್ತು.
ಶವಪರೀಕ್ಷೆ ನಡೆಸಿ ನಂತರ ಮೃತನ ವಾರಾಸುದಾರರಿಗೆ ಹಸ್ತಾಂತರಿಸಲಾಯಿತು.
Next Story