ಡಿ.13 ಕ್ಕೆ ರೈತಸ್ನೇಹಿ ಲಾಂಛನ ಬಿಡುಗಡೆ
ಬೆಂಗಳೂರು, ಡಿ.12: ರೈತರ ಶ್ರಮ ಮತ್ತು ತ್ಯಾಗದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ದಿನಿ ಕ್ರಿಯೇಷನ್ ಸಂಸ್ಥೆಯೂ ‘ರೈತ ಸ್ನೇಹಿ ಲಾಂಛನ’ ಹೊರತಂದಿದ್ದು, ಇಂದು(ಡಿ.13) ಬಿಡುಗಡೆ ಮಾಡಲಿದೆ.
ಬುಧವಾರ ನಗರದ ಪ್ರೆಸ್ಕ್ಲಬ್ನಲ್ಲಿ ಬೆಳಗ್ಗೆ 11:30ಕ್ಕೆ ‘ರೈತ ಸ್ನೇಹಿ ಲಾಂಛನ’ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದ್ದು, ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ, ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ, ಪ್ರೊ.ದೊಡ್ಡರಂಗೇಗೌಡ, ಚಿತ್ರನಟ ಸುದೀಪ್, ಕೆ.ನಾರಾಯಣಗೌಡ ಸೇರಿದಂತೆ ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story