ಬಿಬಿಎಂಪಿ ಮಾಜಿ ಸದಸ್ಯ ಹತ್ಯೆ ಪ್ರಕರಣ: ಆರು ಜನರ ಬಂಧನ
ಬೆಂಗಳೂರು, ಡಿ.12: ಬಿಬಿಎಂಪಿ ಮಾಜಿ ಸದಸ್ಯ, ಜೆಡಿಎಸ್ ಗೋವಿಂದಗೌಡ ಹತ್ಯೆ ಪ್ರಕರಣ ಸಂಬಂಧ ಆರು ಜನರನ್ನು ಇಲ್ಲಿನ ರಾಜಗೋಪಾಲನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಹೆಗ್ಗನಹಳ್ಳಿಯ ರಾಹುಲ್, ಸಂದೀಪ್,ಲಕ್ಷ್ಮಣ, ವೇಲು,ಅಭಿಷೇಕ್, ದೇವರಾಜ್ ಎಂದು ಪೊಲೀಸರು ತಿಳಿಸಿದ್ದಾರೆ.
ಹಣದ ಆಸೆಗಾಗಿ ಆರೋಪಿಗಳು ಗೋವಿಂದಗೌಡ ಅವರನ್ನು ಕೊಲೆಗೈದಿರುವುದಾಗಿ ಹೇಳಲಾಗುತ್ತಿದೆ. ಇನ್ನು ಪ್ರಕರಣ ಸಂಬಂಧ ದೇವರಾಜ್ ಎಂಬಾತ ಆರೋಪಿಗಳಿಗೆ ಆಶ್ರಯ ನೀಡಿದ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಕರಣ ಸಂಬಂಧ ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ.
Next Story