‘ಶಂಸುಲ್ ಉಲಮಾ ಹಜ್ ಉಮ್ರಾ ಝಿಯಾರಃ’ ಉದ್ಘಾಟನೆ
ಮಂಗಳೂರು, ಡಿ. 12: ಎಸ್ಕೆಎಸೆಸೆಫ್ ಸುರತ್ಕಲ್ ವಲಯ ಸಮಿತಿಯ ವತಿಯಿಂದ ‘ಶಂಸುಲ್ ಉಲಮಾ ಹಜ್ ಉಮ್ರಾ ಝಿಯಾರಃ’ ಇದರ ಉದ್ಘಾಟನೆಯು ಸೋಮವಾರ ನಗರದ ಹಂಪನಕಟ್ಟೆದಲ್ಲಿರುವ ಹೊಟೇಲ್ ಸೂರ್ಯದಲ್ಲಿ ನೆರವೇರಿತು.
ಸಮಾರಂಭದ ಅಧ್ಯಕ್ಷತೆಯನ್ನು ದ.ಕ. ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ವಹಿಸಿದ್ದರು. ಸಂಚಾಲಕ ಹಾಜಿ ಅಬ್ಬಾಸ್ ಕಕ್ಕಿಂಜೆ ಅವರಿಗೆ ದ.ಕ. ಜಿಲ್ಲಾ ಖಾಝಿ ಪಾಸ್ಪೋರ್ಟ್ ನೀಡುವ ಮೂಲಕ ‘ಶಂಸುಲ್ ಉಲಮಾ ಹಜ್ ಉಮ್ರಾ ಝಿಯಾರಃ’ಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ದ.ಕ. ಜಿಲ್ಲಾ ಮುಶಾವರದ ಸದಸ್ಯ ವೌಲಾನ ಅಬ್ದುಲ್ ಅಝೀಝ್ ದಾರಿಮಿ ನೆರವೇರಿಸಿದರು. ತೋಡಾರಿನ ಶಂಸುಲ್ ಉಲಮಾ ಅರೇಬಿಕ್ ಕಾಲೇಜಿನ ಉಪ ಪ್ರಾಂಶುಪಾಲ ಉಸ್ತಾದ್ ಉಸ್ಮಾನ್ ಫೈಝಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಸುಲ್ ಉಲಮಾ ಸಂಸ್ಥೆಯ ಚೀಫ್ ಅಮೀರ್ ಆಗಿ ದ.ಕ. ಜಿಲ್ಲಾ ಎಸ್ಕೆಎಸೆಸೆಫ್ನ ಅಧ್ಯಕ್ಷ ಇಸ್ಹಾಕ್ ಫೈಝಿ ಕುಕ್ಕಿಲ ಅವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ದ.ಕ. ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್, ಉಸ್ಮಾನ್ ಫೈಝಿ, ದ.ಕ. ವಕ್ಫ್ ಸಲಹಾ ಸಮಿತಿಯ ಉಪಾಧ್ಯಕ್ಷ ಹಾಜಿ ಶಾಹುಲ್ ಹಮೀದ್ ಮೆಟ್ರೋ, ಸದಸ್ಯ ಹಾಜಿ ಅಬ್ದುಲ್ ಜಲೀಲ್ ಬದ್ರಿಯಾ ಅವರನ್ನು ಸನ್ಮಾನಿಸಲಾಯಿತು.
ಇಸ್ಹಾಕ್ ಫೈಝಿ ಸ್ವಾಗತಿಸಿದರು. ಅಬ್ದುಲ್ ಖಾದರ್ ಮಿಲನ್ ವಂದಿಸಿದರು. ಮೌಲಾನ ಹೈದರ್ ಕಾರ್ಯಕ್ರಮ ನಿರೂಪಿಸಿದರು.