ಆಟ್ಟಿಕಾ ಗೋಲ್ಡ್ ಕಂಪೆನಿ ಮಾಲಕನ ವಿರುದ್ಧ ಎಫ್ಐಆರ್
ಬೆಂಗಳೂರು, ಡಿ.12: ಸಿಬ್ಬಂದಿಗೆ ಜೀವಬೆದರಿಕೆ ಹಾಕಿರುವ ಆರೋಪದ ಮೇಲೆ ಆಟ್ಟಿಕಾ ಗೋಲ್ಡ್ ಕಂಪೆನಿ ಮಾಲಕ ಬೊಮ್ಮನಹಳ್ಳಿ ಬಾಬು ಸೇರಿ ನಾಲ್ವರ ವಿರುದ್ಧ ಇಲ್ಲಿನ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ ಎಂದು ತಿಳಿದುಬಂದಿದೆ.
ಹಲ್ಲೆ, ಜೀವಬೆದರಿಕೆ ಹಾಕಿದ್ದಾರೆಂದು ತನ್ನ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಸಿಸ್ಟಂ ಇಂಜಿನಿಯರ್ ಪ್ರವೀಣ್ ಎಂಬಾತ ನೀಡಿದ ದೂರಿನ್ವಯ ಆಟ್ಟಿಕಾ ಗೋಲ್ಡ್ ಕಂಪೆನಿ ಮಾಲಕ ಬೊಮ್ಮನಹಳ್ಳಿ ಬಾಬು, ಬಾಲಸುಬ್ರಮಣ್ಯ, ಕಿಶೋರ್, ಉಬೇದ್ ಎಂಬುವರ ವಿರುದ್ಧ ಐಪಿಸಿ 506, 341, 323, 342, 504 ಅಡಿಯಲ್ಲಿ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಪ್ರಕರಣ ವಿವರ: ನ.13 ರಂದು ಕ್ವೀನ್ಸ್ ರಸ್ತೆಯ ಆಟ್ಟಿಕಾ ಗೋಲ್ಡ್ ಪ್ರಧಾನ ಕಚೇರಿಗೆ ಕರೆದು ಹಲ್ಲೆ ನಡೆಸಿದ್ದಲ್ಲದೆ, ಒಂದು ಕೊಠಡಿಯಲ್ಲಿ ಹಾಕಿ ದೈಹಿಕ ಹಿಂಸೆ ನೀಡಿದ್ದರು ಎಂದು ಆರೋಪಿಸಿ ಸಿಸ್ಟಂ ಇಂಜಿನಿಯರ್ ಪ್ರವೀಣ್ ಎಂಬುವರು ಕಂಪೆನಿ ಮಾಲಕ ಬೊಮ್ಮನಹಳ್ಳಿ ಬಾಬು, ಬಾಲಸುಬ್ರಮಣ್ಯ, ಕಿಶೋರ್,ಉಬೇದ್ ಎನ್ನುವ ವಿರುದ್ಧ ದೂರು ನೀಡಿದ್ದರು.