ಗುಜರಾತ್ ಚುನಾವಣೆಯಲ್ಲಿ ಪೇಯ್ಡ ಚಾನೆಲ್ಗಳ ಮೋಸದಾಟ
ಮಾನ್ಯರೇ,
ಕೇವಲ ಷೇರು ಪೇಟೆಗೆ ಮೀಸಲಾದ ಆರು ಇಂಗ್ಲಿಷ್ ಟಿವಿ ಚಾನೆಲ್, ಎರಡು ಹಿಂದಿ ಚಾನೆಲ್, ಮತ್ತು ಎರಡು ಗುಜರಾತಿ ಚಾನೆಲ್ಗಳು ಇವೆ. ಈ ಎಲ್ಲಾ ಟಿವಿ ಚಾನೆಲ್ಗಳು ಗುಜರಾತ್ ಚುನಾವಣೆಗೆ ಎರಡು ತಿಂಗಳ ಹಿಂದಿನಿಂದಲೇ ಸತತವಾಗಿ ಉರು ಹೊಡೆದು- ‘‘ಒಂದು ವೇಳೆ ಕೇಸರಿ ಪಕ್ಷ ಗುಜರಾತ್ನಲ್ಲಿ ಸೋತರೆ ಷೇರುಪೇಟೆ ಕನಿಷ್ಠ ಶೇ. 10 ಬೀಳುತ್ತದೆ ಅಂದರೆ ಸೆನ್ಸೆಕ್ಸ್ 3,000 ಪಾಯಿಂಟ್ ಮತ್ತು ನಿಫ್ಟಿ 1,200 ಪಾಯಿಂಟ್ ಕುಸಿಯಲಿದೆ ಹಾಗೂ ಹೂಡಿಕೆದಾರರಿಗೆ ಭಾರೀ ನಷ್ಟವಾಗಲಿದೆ ಎಂದು ಹೆದರಿಸುತ್ತಲೇ ಇದ್ದವು. ಅದರ ಪರಿಣಾಮ ಗುಜರಾತ್ನಲ್ಲಿ ಬಹಳಷ್ಟು ಜನರು ಈ ಪಕ್ಷಕ್ಕೆ ಓಟು ನೀಡಿದ್ದಾರೆ. ಗುಜರಾತ್ನ ವಿಶಿಷ್ಟತೆ ಎಂದರೆ ಧನಿಕರು ಮಾತ್ರವಲ್ಲ ಅಲ್ಲಿಯ ಶೇ. 80 ಮಧ್ಯಮ ವರ್ಗದ ಜನರೂ ಷೇರುಪೇಟೆಯಲ್ಲಿ ಸಕ್ರಿಯವಾಗಿ ಹೂಡಿಕೆ ಮಾಡುತ್ತಾರೆ. ಪ್ರತಿದಿನ ಒಂದು ಗಂಟೆಯಾದರೂ ಷೇರು ಪೇಟೆಗೆ ಸಂಬಂಧಪಟ್ಟ ಟಿವಿ ಚಾನೆಲ್ಗಳನ್ನು ನೋಡದಿದ್ದರೆ ಅವರಿಗೆ ನಿದ್ದೆಯೇ ಬರುವುದಿಲ್ಲ. ಈ ವಿಷಯ ಗೊತ್ತಿದ್ದ ಕೇಸರಿ ಪಕ್ಷ ಈ ಬಾರಿ ಈ ಎಲ್ಲಾ ಷೇರುಪೇಟೆ ಟಿವಿ ಚಾನೆಲ್ಗಳನ್ನು ತನ್ನ ಜೇಬಿನಲ್ಲಿ ಹಾಕಿಕೊಂಡು ಅವುಗಳ ಮುಖಾಂತರ ಗುಜರಾತ್ನ ಮಧ್ಯಮವರ್ಗದ ಜನರಲ್ಲಿ ಭಯ ಹುಟ್ಟಿಸಿ ಕಾಂಗ್ರೆಸ್ ಗೆದ್ದರೆ ಷೇರುಪೇಟೆ ತೀವ್ರವಾಗಿ ಇಳಿದು ಜನರಿಗೆ ಲಕ್ಷಾಂತರ ನಷ್ಟವಾಗುತ್ತದೆ ಎಂದು ಎರಡು ತಿಂಗಳಿನಿಂದ ಉರು ಹೊಡೆದು ಹೆಚ್ಚಿನ ಮಧ್ಯಮ ವರ್ಗದ ಜನರು ತಮಗೇ ಮತ ನೀಡುವಂತೆ ಮಾನಸಿಕ ಒತ್ತಡ ಹೇರುವಲ್ಲಿ ಯಶಸ್ವಿಯಾಯಿತು. ಹಾಗೆಯೇ ಡಿಸ್ಕವರಿ-ಸಾಯನ್ಸ್ ಎಂಬ ಇಂಗ್ಲಿಷ್ ಚಾನೆಲ್ನವರು ಮೊನ್ನೆ ಡಿಸೆಂಬರ್ 12 ಮತ್ತು 13ಕ್ಕೆ ಪ್ರಸಾರ ಮಾಡಿದ ‘ರಾಮಸೇತು ವೈಜ್ಞಾನಿಕ ಸತ್ಯ’ ಎಂಬ ಕಾರ್ಯಕ್ರಮದ ಜಾಹೀರಾತು (ಪ್ರೋಮೊ) ನಿಜವಾಗಿ ಸಂಘಪರಿವಾರ ಬೆಂಬಲಿಗ ಪಕ್ಷವು ಗುಜರಾತ್ ಚುನಾವಣೆಯಲ್ಲಿ ಮತ ಗಳಿಸಲು ಚಾನೆಲ್ನವರಿಗೆ ಕೋಟಿ ಗಟ್ಟಲೆ ಹಣ ಕೊಟ್ಟು ಹಾಕಿಸಿದ ಜಾಹೀರಾತು ಆಗಿತ್ತು ಎಂದು ನಂತರ ಬಹಿರಂಗವಾಯಿತು. ಇಂತಹ ಗಿಮಿಕ್ಗಳಿಂದಲೇ ಎರಡನೇ ಹಂತದ ಚುನಾವಣೆಯಲ್ಲಿ ಇವರಿಗೆ ಲಾಭವಾಯಿತು ಎನ್ನಲಾಗುತ್ತದೆ. ಆ ದಿನದ ನಂತರ ಡಿಸ್ಕವರಿ ಚಾನೆಲ್ ಈ ಕಾರ್ಯಕ್ರಮದ ಪ್ರೋಮೊ ಮರೆತೇ ಬಿಟ್ಟಿದೆ. ಅದೇ ಪ್ರಕಾರ ಟಿವಿ ಚಾನೆಲ್ಗಳು ಪದ್ಮಾವತಿ ಮತ್ತು ಖಿಲ್ಜಿಯವರನ್ನೂ ಮರೆತಿವೆ. ನೋಡಿದಿರಾ ಪೇಯ್ಡಿ ಟಿವಿ ಚಾನೆಲ್ಗಳು ಎಷ್ಟೊಂದು ಉಪಯುಕ್ತ ಎಂದು?.