ಜೀವ ಉಳಿಸಲು ನೆಟ್ವರ್ಕ್ ತೊಂದರೆ
ಮಾನ್ಯರೇ,
ಚಾರ್ಮಾಡಿ ಘಾಟಿ ವಲಯದ ಪ್ರಾರಂಭದಿಂದ ಮುಕ್ತಾಯದವರೆಗೂ ಮೊಬೈಲ್ ನೆಟ್ವರ್ಕ್ನ ಸಮಸ್ಯೆ ಇದೆ. ಸುಮಾರು 30 ಕಿ.ಮೀ ಇರುವ ಈ ಘಾಟಿ ರಸ್ತೆಯ ಮಧ್ಯೆ ಎಲ್ಲಾದರೂ ವಾಹನ ಅಪಘಾತಗಳು ಸಂಭವಿಸಿದರೆ ಮೂಡಿಗೆರೆ ಅಥವಾ ಬೆಳ್ತಂಗಡಿ ತಾಲೂಕಿನ ಉಜಿರೆಯಿಂದಲೇ ಆ್ಯಂಬುಲೆನ್ಸ್ ಹೋಗಬೇಕು. ಆ್ಯಂಬುಲೆನ್ಸ್ಗೆ ಕರೆ ಮಾಡಬೇಕಾದರೆ ನೆಟ್ವರ್ಕ್ ಸಮಸ್ಯೆಯಿಂದಾಗಿ ಕರೆ ತಲುಪದಿದ್ದರೆ ವಿಷಯ ತಿಳಿಸಲು ತುಂಬಾ ಕಷ್ಟಪಡಬೇಕಾಗುತ್ತದೆ. ಹೀಗೆ ಅಮೂಲ್ಯ ಸಮಯ ವ್ಯರ್ಥವಾಗಿ ಹೇಗೋ ವಿಷಯ ತಿಳಿದು ಅಷ್ಟು ದೂರದಿಂದ ಘಟನಾಸ್ಥಳಕ್ಕೆ ಆ್ಯಂಬುಲೆನ್ಸ್ ಬಂದು ತಲುಪುವಾಗ ಅಪಘಾತಕ್ಕೊಳಗಾದ ಜೀವ ಮರಣವಪ್ಪುವ ಸಾಧ್ಯತೆಯೇ ಹೆಚ್ಚಿರುತ್ತದೆ.
ಆದ್ದರಿಂದ ಇಂತಹ ಗಂಭೀರ ಸಮಸ್ಯೆಯ ಬಗ್ಗೆ ಗಮನಹರಿಸಿ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
Next Story