ಕಿವೀಸ್ ವಿರುದ್ಧದ ಟೂರ್ನಿಗೆ ಶ್ರೀಜೇಶ್
ಬೆಂಗಳೂರು, ಜ.9: ಗೋಲುಕೀಪರ್ ಪಿ.ಆರ್.ಶ್ರೀಜೇಶ್ ಅವರು ನ್ಯೂಝಿಲೆಂಡ್ನಲ್ಲಿ ನಡೆಯಲಿರುವ ನಾಲ್ಕು ರಾಷ್ಟ್ರಗಳ ಹಾಕಿ ಟೂರ್ನಮೆಂಟ್ಗೆ ಭಾರತದ ಹಾಕಿ ತಂಡಕ್ಕೆ ವಾಪಸಾಗಿದ್ದಾರೆ.
ಕಳೆದ ಮೇ ತಿಂಗಳಲ್ಲಿ ಸುಲ್ತಾನ್ ಅಝ್ಲಾನ್ ಷಾ ಟೂರ್ನಮೆಂಟ್ನಲ್ಲಿ ಗಾಯದಿಂದಾಗಿ ಶ್ರೀಜೇಶ್ ತಂಡದಿಂದ ದೂರ ಉಳಿದಿದ್ದರು. ಆ ಬಳಿಕ ಇದೇ ಮೊದಲ ಬಾರಿ ತಂಡಕ್ಕೆ ವಾಪಸಾಗಿದ್ದಾರೆ. ಸ್ಟ್ರೇಕರ್ ಎಸ್ವಿ ಸುನೀಲ್ಗೆ ಈ ಟೂರ್ನಮೆಂಟ್ಗೆ ವಿಶ್ರಾಂತಿ ನೀಡಲಾಗಿದೆ. ನಾಲ್ವರು ಯುವ ಆಟಗಾರರು ತಂಡದಲ್ಲಿ ಅವಕಾಶ ಪಡೆದಿದ್ದಾರೆ.
ಜೂನಿಯರ್ ವಿಶ್ವಕಪ್ ಜಯಿಸಿದ ತಂಡದ ಗೋಲು ಕೀಪರ್ ಕೃಷ್ಣ ಬಹಾದೂರ್ ಪಾಠಕ್, ಅದೇ ತಂಡದಲ್ಲಿ ಮಿಡ್ಫೀಲ್ಡರ್ಗಳಾದ ಸಿಮರ್ರಂಜಿತ್ ಸಿಂಗ್, ವಿವೇಕ್ ಸಾಗರ್ ಪ್ರಸಾದ್, ದಿಲ್ಪ್ರೀತ್ ಸಿಂಗ್ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
Next Story