ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಬರೋಡಾ, ಸೌರಾಷ್ಟ್ರ
ಹೊಸದಿಲ್ಲಿ, ಜ.10: ಮುಶ್ತಾಕ್ ಅಲಿ ಟ್ರೋಫಿಯ ಪಶ್ಚಿಮ ವಲಯದ ಪಂದ್ಯದಲ್ಲಿ ಕೇದಾರ್ ದೇವಧರ್ ಅವರ ಶತಕದ ಸಹಾಯದಿಂದ ಬರೋಡಾ ತಂಡ ಗುಜರಾತ್ ತಂಡವನ್ನು 36 ರನ್ಗಳಿಂದ ಮಣಿಸಿತು. ಮುಂಬೈ ತಂಡವನ್ನು 8 ವಿಕೆಟ್ಗಳಿಂದ ಮಣಿಸಿರುವ ಸೌರಾಷ್ಟ್ರ ತಂಡ ಸತತ 2ನೇ ಪಂದ್ಯವನ್ನು ಜಯಿಸಿ ಅಂಕಪಟ್ಟಿಯಲ್ಲಿ ಬರೋಡಾದೊಂದಿಗೆ ಅಗ್ರ ಸ್ಥಾನಕ್ಕೇರಿದೆ.
ಕೇದಾರ್ ದೇವಧರ್ ಶತಕದ(100, 61 ಎಸೆತ, 11 ಬೌಂಡರಿ, 4 ಸಿಕ್ಸರ್) ನೆರವಿನಿಂದ ಬರೋಡಾ ತಂಡ 7 ವಿಕೆಟ್ಗಳ ನಷ್ಟಕ್ಕೆ 175 ರನ್ ಗಳಿಸಿತು. ಬರೋಡಾ 25 ರನ್ಗೆ 4 ವಿಕೆಟ್ ಕಳೆದುಕೊಂಡಾಗ ತಂಡವನ್ನು ಆಧರಿಸಿದ ದೇವಧರ್ ಹಾಗೂ ಸ್ವಪ್ನಿಲ್ ಸಿಂಗ್(44) 101 ರನ್ ಜೊತೆಯಾಟ ನಡೆಸಿದರು.
ಆನಂತರ ಎದುರಾಳಿ ಗುಜರಾತ್ನ್ನು ಕೇವಲ 18 ಓವರ್ಗಳಲ್ಲಿ139 ರನ್ಗೆ ಆಲೌಟ್ ಮಾಡಿದೆ. ಸತತ 2ನೇ ಜಯ ಸಾಧಿಸಿ 2 ಪಂದ್ಯಗಳಲ್ಲಿ 8 ಅಂಕ ಗಳಿಸಿದೆ. ಮತ್ತೊಂದೆಡೆ, ಗುಜರಾತ್ ತಂಡ ಸತತ 3ನೇ ಸೋಲು ಕಂಡಿದೆ. ಸೌರಾಷ್ಟ್ರದ ಮಧ್ಯಮ ವೇಗಿ ಶೌರ್ಯ ಶಾಂಡಿಲ್ಯ(4-22) ಬೌಲಿಂಗ್ ದಾಳಿಗೆ ಸಿಲುಕಿದ ಮುಂಬೈ 19.3 ಓವರ್ಗಳಲ್ಲಿ 130 ರನ್ಗೆ ಆಲೌಟಾಯಿತು. ಗೆಲ್ಲಲು ಸುಲಭ ಸವಾಲು ಪಡೆದ ಸೌರಾಷ್ಟ್ರ ತಂಡ ಆರಂಭಿಕ ಆಟಗಾರ ರಾಬಿನ್ ಉತ್ತಪ್ಪರ ಮಿಂಚಿನ ಅರ್ಧಶತಕ(56 ರನ್, 36 ಎಸೆತ)ನೆರವಿನಿಂದ 17.2 ಓವರ್ಗಳಲ್ಲಿ ಗೆಲುವಿನ ದಡ ಸೇರಿತು. ಮುಂಬೈ 3 ಪಂದ್ಯಗಳಲ್ಲಿ 2ನೇ ಸೋಲು ಕಂಡಿದೆ.