ಜ.21: ಮಾಜಿ ಪ್ರಧಾನಿ ದೇವೇಗೌಡ ದ.ಕ. ಜಿಲ್ಲೆಗೆ
ಮಂಗಳೂರು, ಜ. 21: ಮಾಜಿ ಪ್ರಧಾನಿ ದೇವೇಗೌಡ ಹಾಗೂ ಜಾತ್ಯತೀತ ಜನತಾದಳದ ಮಹಾ ಪ್ರಧಾನ ಕಾರ್ಯದರ್ಶಿ ಬಿ.ಎಂ. ಫಾರೂಕ್ ಅವರು ಜ.21ರಂದು ಜಿಲ್ಲೆಗೆ ಭೇಟಿ ನೀಡಲಿದ್ದಾರೆ.
ರವಿವಾರ ಮಧ್ಯಾಹ್ನ ನಗರಕ್ಕೆ ಆಗಮಿಸಲಿದ್ದು, ಈ ಸಂದರ್ಭ ಇತ್ತೀಚೆಗೆ ಹತ್ಯೆಗೀಡಾದ ದೀಪಕ್ರಾವ್ ಹಾಗೂ ಬಶೀರ್ ಮನೆಗೆ ಭೇಟಿ ನೀಡಲಿದ್ದು, ಬಳಿಕ ಸುರತ್ಕಲ್ ಕ್ಷೇತ್ರದ ಕಾರ್ಯಕರ್ತರೊಂದಿಗೆ ಪಕ್ಷದ ಸಂಘಟನೆ ಬಗ್ಗೆ ಚರ್ಚಿಸಲಿದ್ದಾರೆ. ನಂತರ ಪಡುಬಿದ್ರೆ ಕರ್ನಿರೆ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿ ದ್ದಾರೆ ಎಂದು ಜಿಲ್ಲಾ ಜನತಾ ದಳದ ಅಧ್ಯಕ್ಷ ಬಿ. ಮುಹಮ್ಮದ್ ಕುಂಞಿ ತಿಳಿಸಿದ್ದಾರೆ.
Next Story