ಪಣಂಬೂರು ಹತ್ಯೆ ಪ್ರಕರಣ: ಓರ್ವ ಪೊಲೀಸ್ ವಶಕ್ಕೆ?
ಹತ್ಯೆಗೀಡಾದ ಶಿವರಾಜ್
ಮಂಗಳೂರು, ಜ.22: ಇಂದು ಮುಂಜಾನೆ ಪಣಂಬೂರು ಸಮೀಪ ನಡೆದಿರುವ ಶಿವರಾಜ್(45) ಎಂಬವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಶಂಕಿತ ಓರ್ವ ಆರೋಪಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಮನೆಯ ಟೆರೇಸ್ ಮೇಲೆ ಮಲಗಿದ್ದ ಬೊಕ್ಕಪಟ್ಣ ನಿವಾಸಿ ಕರುಣಾಕರ ಎಂಬವರ ಪುತ್ರ ಶಿವರಾಜ್ ಅವರನ್ನು ಇಂದು ಮುಂಜಾನೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆಗೈದಿದ್ದಾರೆ. ಮೃತರು ಮೆಂಡನ್ ಗ್ಯಾಂಗ್ನ ರೌಡಿ ಶೀಟರ್ ಭರತೇಶ್ ಎಂಬಾತನ ಅಣ್ಣ ಎಂದು ತಿಳಿದುಬಂದಿದೆ.
ಭರತೇಶ್ ಮೇಲಿನ ದ್ವೇಷದಲ್ಲಿ ಈ ಹತ್ಯೆ ನಡೆದಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲಿ ತನಿಖೆ ಮುಂದುವರಿಸಿರುವ ಪೊಲೀಸರು ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ಓರ್ವ ಶಂಕಿತ ಆರೋಪಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
Next Story