ಕಾಮಗಾರಿಗಳ ವೈಫಲ್ಯ
ಮಾನ್ಯರೇ,
ನಗರದ ಜ್ಯೋತಿ ಸರ್ಕಲ್ನ ರಸ್ತೆಗೆ ಇತ್ತೀಚೆಗಷ್ಟೇ ಇಂಟರ್ಲಾಕ್ಗಳನ್ನು ಅಳವಡಿಸಲಾಗಿದ್ದು ಇದೀಗ ಕಿತ್ತೆಸೆಯಲಾಗಿದೆ.
ರಸ್ತೆ ಅಥವಾ ಚರಂಡಿಗಳನ್ನು ಯಾವುದೇ ಸ್ಪಷ್ಟವಾದ ಯೋಜನೆಯಿಲ್ಲದೆ ನಿರ್ವಹಿಸುವುದ ರಿಂದಾಗಿಯೇ ಇಂತಹ ಕಾಮಗಾರಿಗಳು ವೈಫಲ್ಯ ಕಾಣುತ್ತದೆ. ಈ ರೀತಿಯ ಕಾಮಗಾರಿಗಳಿಂದ ಗುತ್ತಿಗೆ ದಾರರಿಗೆ ಲಾಭವಲ್ಲದೆ ಮತ್ಯಾವ ಉಪಯೋಗವೂ ಇಲ್ಲ. ಇಂತಹ ಕಾಮಗಾರಿಗಳಿಂದ ಉಂಟಾಗುವ ಆರ್ಥಿಕ ನಷ್ಟಕ್ಕೆ ಯಾರು ಹೊಣೆ.?
ಪದೇ ಪದೇ ಸಾರ್ವಜನಿಕ ಸಂಚಾರಕ್ಕೆ ತೊಡಕ ನ್ನುಂಟು ಮಾಡುವ ಇಂತಹ ಕಾಮಗಾರಿಗಳನ್ನು ಇನ್ನಾದರೂ ಸರಿಯಾದ ಯೋಚನೆ ಮಾಡಿ ನಿರ್ವಹಿಸುವರೇ?
Next Story