ಲ್ಯಾಪ್ಟಾಪ್ ವಿತರಿಸಿ
ಮಾನ್ಯರೇ,
ಕರ್ನಾಟಕ ಸರಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪತ್ರಿಕೋದ್ಯಮ ಪದವೀಧರರಿಗೆ ಏರ್ಪಡಿಸಿದ್ದ ವೃತ್ತಿ ನಿರೂಪಣಾ ಕೌಶಲ್ಯ ಮತ್ತು ವ್ಯಕ್ತಿ ವಿಕಸನ ತರಬೇತಿಯನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಒಬಿಸಿ ವರ್ಗದ ಅಭ್ಯರ್ಥಿಗಳಿಗೆ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗಿತ್ತು. ಅದರಂತೆ ಮೂರು ಬ್ಯಾಚ್ಗಳಿಗೆ ಒಂದು ವಾರಗಳ ಕಾಲ ನುರಿತ ಹಾಗೂ ಅನುಭವಿ ಪತ್ರಕರ್ತರಿಂದ ತರಬೇತಿ ಮತ್ತು ವಿದ್ಯುನ್ಮಾನ ಮಾಧ್ಯಮಕ್ಕೆ ಹಾಗೂ ಪತ್ರಿಕಾಲಯಕ್ಕೆ ಭೇಟಿಯ ಅವಕಾಶ ಕೂಡ ಕಲ್ಪಿಸಲಾಗಿತ್ತು. ಪ್ರತೀ ವರ್ಷದಂತೆ ಈ ವರ್ಷವು ತರಬೇತಿಯಲ್ಲಿ ಭಾಗವಹಿಸಿದ ಅಭ್ಯರ್ಥಿಗಳಿಗೆ ಲ್ಯಾಪ್ಟಾಪ್ ನೀಡಲಾಗುವುದು ಎಂದು ಕಾರ್ಯಕ್ರಮದಲ್ಲಿ ಅಧಿಕಾರಿಗಳು ಹೇಳಿದ್ದರು. ತರಬೇತಿ ಮುಗಿದು ಹಲವು ವಾರಗಳೇ ಕಳೆದಿದೆ. ಆದರೂ ಇಲ್ಲಿಯವರೆಗೆ ತರಬೇತಿ ಪಡೆದುಕೊಂಡಿರುವ ಪತ್ರಿಕೋದ್ಯಮ ಪದವೀಧರರಿಗೆ ಯಾವುದೇ ಮಾಹಿತಿ ಬಂದಿಲ್ಲ.
ಪತ್ರಿಕೋದ್ಯಮದ ಪದವೀಧರರಿಗೆ ಲ್ಯಾಪ್ಟಾಪ್ ಅವಶ್ಯವಿದ್ದು ಆದಷ್ಟು ಬೇಗನೆ ವಿತರಿಸಲು ವಾರ್ತಾ ಇಲಾಖೆ ಮುಂದಾಗಬೇಕಾಗಿದೆ.
Next Story