ಮೈಸೂರು: ಸಾಲ ಸೌಲಭ್ಯದ ಮಂಜೂರಾತಿ ಆದೇಶ ಪತ್ರ ವಿತರಣೆ
ಮೈಸೂರು,ಫೆ.17: ವಿವಿಧ ನಿಗಮ ಮಂಡಳಿಗಳಿಂದ ಕೆ ಆರ್ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಅರ್ಹ ಫಲಾನುಭವಿಗಳಿಗೆ ಸಾಲಸೌಲಭ್ಯ ಮಂಜೂರಾತಿ ಆದೇಶ ಪ್ರತಿ ವಿತರಣಾ ಕಾರ್ಯಕ್ರಮವನ್ನು ಮೈಸೂರಿನ ಕುವೆಂಪುನಗರದ ಸಾಮ್ರಾಟ್ ಕಲ್ಯಾಣಮಂಟಪದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಶನಿವಾರ ನಡೆದ ಕಾರ್ಯಕ್ರಮದಲ್ಲಿ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಫಲಾನುಭವಿಗಳಿಗೆ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ ನಿಯಮಿತದಲ್ಲಿ ಒಟ್ಟು 272 ಫಲಾನುಭವಿಗಳು ಆಯ್ಕೆಯಾಗಿದ್ದು, ಇದರ ಒಟ್ಟು ಸಾಲದ ಮೊತ್ತ ರೂ.415 ಕೋ.ರೂ. ಹಾಗೂ ಕರ್ನಾಟಕ ವಾಲ್ಮೀಕಿ ಅಭಿವೃದ್ಧಿ ನಿಗಮ ನಿಯಮಿತದಲ್ಲಿ ಆಯ್ಕೆಯಾದ ಒಟ್ಟು ಫಲಾನುಭವಿಗಳ ಸಂಖ್ಯೆ 73, ಇದರ ಸಾಲದ ಮೊತ್ತ ರೂ.56 ಲಕ್ಷಗಳು ಹಾಗೂ ಡಿ.ದೇವರಾಜ ಅರಸು ಅಭಿವೃದ್ಧಿ ನಿಗಮ ನಿಯಮಿತದಲ್ಲಿ ಆಯ್ಕೆಯಾದ ಒಟ್ಟು ಫಲಾನುಭವಿಗಳ ಸಂಖ್ಯೆ 170, ಇದರ ಒಟ್ಟು ಸಾಲದ ಮೊತ್ತ 56 ಲಕ್ಷರೂ.ಗಳು ಹಾಗೂ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತದಲ್ಲಿ ಆಯ್ಕೆಯಾದ ಫಲಾನುಭವಿಗಳ ಸಂಖ್ಯೆ 60 ಇದರ ಸಾಲದ ಮೊತ್ತ 21ಲಕ್ಷ ರೂ. ಒಟ್ಟು ಎಲ್ಲಾ ನಿಗಮ ಮಂಡಳಿಗಳ ಸಾಲದ ಮೊತ್ತ 575 ಕೋ.ರೂ.ಗಳ ಸಾಲಸೌಲಭ್ಯ ಮಂಜೂರಾತಿ ಆದೇಶ ಪ್ರತಿಯನ್ನು ಶಾಸಕ ಸೋಮಶೇಖರ್ ಅರ್ಹ ಫಲಾನುಭವಿಗಳಿಗೆ ವಿತರಿಸಿದರು.
ಈ ಸಂದರ್ಭ ಮಾಜಿ ಮಹಾಪೌರರುಗಳಾದ ಪುರುಷುತ್ತೋಮ್, ಪುಷ್ಪಾಲತಾ ಚಿಕ್ಕಣ್ಣ, ಬ್ಲಾಕ್ ಅಧ್ಯಕ್ಷ ಜಿ ಸೋಮಶೇಖರ್, ಆಶ್ರಯ ಸಮಿತಿ ಸದಸ್ಯ ನಾಸೀರ್ ಪಾಷಾ, ಕೆಪಿಸಿಸಿ ಸದಸ್ಯೆ ವೀಣಾ, ಕೆಆರ್ ಬ್ಲಾಕ್ ಮಹಿಳಾ ಅಧ್ಯಕ್ಷೆ ಲೀಲಾ ಪಂಪಾವತಿ, ಬ್ಲಾಕ್ ಅಧ್ಯಕ್ಷ ಶ್ರೀಧರ್, ಕಾಂಗ್ರೆಸ್ ಮುಖಂಡ ಶಾಂತವೀರಸ್ವಾಮಿ ಮತ್ತಿತರರು ಪಾಲ್ಗೊಂಡಿದ್ದರು. ಐನೂರಕ್ಕೂ ಹೆಚ್ಚು ಫಲಾನುಭವಿಗಳು ಭಾಗವಹಿಸಿದ್ದರು.