ಜಾರಿಗೆಬೈಲು: ಎಸ್.ಬಿ.ಎಸ್. ವಿದ್ಯಾರ್ಥಿಗಳಿಂದ ಸೈಕಲ್ ಜಾಥಾ
ಬೆಳ್ತಂಗಡಿ, ಫೆ.18: ‘ಧರ್ಮ ಅಳಿಯದೆ ಜಗತ್ತು ಉಳಿಯಲಿ’ ಎಂಬ ಸಂದೇಶದೊಂದಿಗೆ ಸುನ್ನಿ ಜಂ ಇಯ್ಯತುಲ್ ಮುಅಲ್ಲಿಮೀನ್ ನಿರ್ದೇಶಿಸಿದ ಮದ್ರಸ ಸಮ್ಮೇಳನದ ಪ್ರಯುಕ್ತ ಶಾಂತಿ ಸೌಹಾರ್ದ ಪುನಃ ಸ್ಥಾಪನೆ, ಮದ್ಯಪಾನ, ಮಾದಕ ದ್ರವ್ಯಗಳ ವಿರುದ್ಧ ಜಾಗೃತಿಯ ಧ್ಯೇಯದಲ್ಲಿ ಜಾರಿಗೆಬೈಲು ಹಿದಾಯತುಲ್ ಇಸ್ಲಾಮ್ ಸೆಕೆಂಡರಿ ಮದ್ರಸದ ವಿದ್ಯಾರ್ಥಿಗಳು ಇತ್ತೀಚೆಗೆ ಸೈಕಲ್ ಜಾಥಾ ನಡೆಸಿದರು.
ಸ್ಥಳೀಯ ಮಸೀದಿಯ ಖತೀಬ್ ಅಬ್ದುರ್ರಹ್ಮಾನ್ ಬಾಖವಿ ರ್ಯಾಲಿಗೆ ಚಾಲನೆ ನೀಡಿದರು. ಸದರ್ ಮುಅಲ್ಲಿಂ ಎನ್.ಎಂ.ಶರೀಫ್ ಸಖಾಫಿ, ರಫೀಕ್ ಮುಸ್ಲಿಯಾರ್, ಅಶ್ರಫ್ ಸಅದಿ, ಫಾರೂಕ್ ಕೆಸಿಎಫ್, ಹಾರಿಸ್ ಕುಕ್ಕುಡಿ, ಝಾಹಿದ್ ಕುಕ್ಕುಡಿ ಮತ್ತಿತರರು ಉಪಸ್ಥಿತರಿದ್ದರು.
Next Story