ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷ ತೊರೆದು ಎಸ್ಡಿಪಿಐ ಸೇರ್ಪಡೆ
ಮೈಸೂರು,ಫೆ.22: ನಗರದ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ನೂರಾರು ಮುಖಂಡರು ಪಕ್ಷ ತೊರೆದು ಎಸ್.ಡಿ.ಪಿ.ಐ ಪಕ್ಷದ ರಾಜ್ಯ ಪ್ರಧಾನಕಾರ್ಯದರ್ಶಿ ಅಬ್ದುಲ್ ಮಜೀದ್ ನೇತೃತ್ವದಲ್ಲಿ ಎಸ್.ಡಿ.ಪಿ.ಐ ಪಕ್ಷವನ್ನು ಸೇರ್ಪಡೆಗೊಂಡರು.
ಜೆ.ಡಿ.ಎಸ್ ನ ಎಸ್.ಟಿ, ಎಸ್.ಸಿ ಅಧ್ಯಕ್ಷರಾದ ರಿತೇಶ್, ಯೂತ್ ಜೆ.ಡಿ.ಎಸ್ ನ ಉಪಾಧ್ಯಕ್ಷರಾದ ಶ್ರೀನಿವಾಸ್, ಜೆ.ಡಿ.ಎಸ್ ಮಹಿಳಾ ಸಂಘದ ಅಧ್ಯಕ್ಷರಾದ ಮೆರಿ, ಕಾಂಗ್ರೆಸ್ ಕಾರ್ಯಕರ್ತರಾದ ಪ್ರವಿಣ್, ಸೀನಪ್ಪ, ಅಪ್ಪು, ರಮೇಶ್, ಸಂತೋಷ್, ಪಿಂಟು, ರಾಖಿ, ದಾಸ, ಹಾಗೂ ಇವರ ಜೊತೆ ಹಲವಾರು ಕಾಂಗ್ರೆಸ್ ಹಾಗೂ ಜೆ.ಡಿ.ಎಸ್ ಕಾರ್ಯಕರ್ತರು ಎಸ್.ಡಿ.ಪಿ.ಐ ಪಕ್ಷದ ಧ್ವಜವನ್ನು ಸ್ವೀಕರಿಸುವ ಮೂಲಕ ಸೇರ್ಪಡೆಯಾದರು.
ಈ ಕಾರ್ಯಕ್ರಮದಲ್ಲಿ ಎಸ್.ಡಿ.ಪಿ.ಐ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಅಬ್ದುಲ್ ಲತೀಫ್, ಮೈಸೂರು ನಗರ ಕಾರ್ಯದರ್ಶಿ ಕೌಶಾನ್ ಬೇಗ್, ನಗರ ಸಮೀತಿ ಸದಸ್ಯರಾದ ಮತೀನ್ ಬೇಗ್, ತಬ್ರೇಝ್ ಸೇಠ್, ವಾರ್ಡ್ 51ರ ಕಾರ್ಪೋರೇಟರಾದ ಎಸ್ ಸ್ವಾಮಿ, ಎಸ್.ಡಿ.ಪಿ.ಐ ಮೈಸೂರು ಮುಖಂಡರಾದ ಕುಮಾರಸ್ವಾಮಿ, ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.