ತಮಿಳುನಾಡಿನಲ್ಲಿ ಮತ್ತೊಂದು ಪೆರಿಯಾರ್ ಪ್ರತಿಮೆ ಧ್ವಂಸ
ಚೆನ್ನೈ, ಮಾ.20: ಪೆರಿಯಾರ್ ಇ,ವಿ. ರಾಮಸ್ವಾಮಿಯವರ ಪ್ರತಿಮೆಯೊಂದನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿರುವ ಘಟನೆ ತಮಿಳುನಾಡಿನ ಪುದುಕೋಟೆ ಜಿಲ್ಲೆಯಲ್ಲಿ ನಡೆದಿದೆ.
ಈ ಸಂಬಂಧ ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ತ್ರಿಪುರಾದಲ್ಲಿ ಲೆನಿನ್ ಪ್ರತಿಮೆ ಧ್ವಂಸದೊಂದಿಗೆ ದೇಶದ ಹಲವೆಡೆ ಪ್ರತಿಮೆಗಳ ಮೇಲಿನ ದಾಳಿ ಆರಂಭಗೊಂಡಿತ್ತು.
ಬಿಜೆಪಿ ನಾಯಕ ಎಚ್.ರಾಜಾ ಅವರ ವಿವಾದಾತ್ಮಕ ಫೇಸ್ಬುಕ್ ಪೋಸ್ಟ್ ಬಳಿಕ ಪೆರಿಯಾರ್ ಪ್ರತಿಮೆಗೆ ದುಷ್ಕರ್ಮಿಗಳು ಹಾನಿಯೆಸಗಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಬಂಧಿಸಲಾಗಿತ್ತು.
Next Story