ಕೇಂಬ್ರಿಜ್ ಅನಾಲಿಟಿಕಾ ಸೇವೆ ಪಡೆದಿದ್ದ ಬಿಜೆಪಿ, ಜೆಡಿಯು: ಕಾಂಗ್ರೆಸ್ ಆರೋಪ
ಹೊಸದಿಲ್ಲಿ, ಮಾ.21: ಮಾಹಿತಿ ಹಾಗೂ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಆರೋಪವನ್ನು ನಿರಾಕರಿಸಿರುವ ಕಾಂಗ್ರೆಸ್, 2010ರಲ್ಲಿ ಬಿಜೆಪಿ ಹಾಗೂ ಜೆಡಿಯುನ ನಿತೀಶ್ ಕುಮಾರ್ ಅವರು ಕೇಂಬ್ರಿಜ್ ಅನಾಲಿಟಿಕಾದ ಸೇವೆ ಪಡೆದುಕೊಂಡಿದೆ ಎಂದು ತಿರುಗೇಟು ನೀಡಿದೆ.
‘‘ಇದು ಕಾಂಗ್ರೆಸ್ ಪಕ್ಷ ಹಾಗೂ ಕೇಂಬ್ರಿಜ್ ಅನಾಲಿಟಿಕಾದೊಂದಿಗಿನ ಸಂಬಂಧದ ಬಗೆಗಿನ ಪ್ರಶ್ನೆ ಮಾತ್ರವಲ್ಲ ಇದು ಭಾರತದ ಮುಕ್ತ, ಪಾರದರ್ಶಕ ಚುನಾವಣೆ ಹಾಗೂ ನಮ್ಮ ದೇಶದ ಪ್ರಜಾಪ್ರಭುತ್ವ ಮೌಲ್ಯದ ಬಗೆಗಿನ ಪ್ರಶ್ನೆ’’ ಎಂದು ಕಾಂಗ್ರೆಸ್ ನಾಯಕ ರಣ್ದೀಪ್ ಸುರ್ಜೇವಾಲ ಹೇಳಿದ್ದಾರೆ.
Next Story