ಮೇಘರಾಜ ಶೆಟ್ಟಿ ಗುಲ್ವಾಡಿ
ಕುಂದಾಪುರ, ಎ.10: ಸಮಾಜಸೇವಕ ಗುಲ್ವಾಡಿ ಮೇಘರಾಜ ಶೆಟ್ಟಿ (58) ಇಂದು ಮುಂಜಾನೆ ಹೃದಯಾಘಾತದಿಂದ ನಿಧನರಾದರು.
ಹಿರಿಯ ಕೃಷಿಕ ಬಿ.ಎಸ್.ನಾರಾಯಣ ಶೆಟ್ಟಿ ಅವರ ಪುತ್ರರಾಗಿರುವ ಮೇಘರಾಜ ಶೆಟ್ಟಿ, ಮಾಜಿ ಶಾಸಕ ದಿ. ಜಿ.ಎಸ್. ಆಚಾರ್ ಅವರ ನಿಕಟವರ್ತಿಯಾಗಿ ಬೈಂದೂರು ಬ್ಲಾಕ್ ಕಾಂಗ್ರೆಸ್ನ ಮಾಜಿ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು.
ಮೃತರು ತಂದೆ-ತಾಯಿ, ಮೂವರು ಸಹೋದರರು, ಓರ್ವ ಸಹೋದರಿ ಮತ್ತು ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
Next Story