ಡಾ.ರಾಜ್ ಕುಮಾರ್ ಸಂಸ್ಕೃತಿಯ ರಾಯಭಾರಿ: ಕಾತ್ಯಾಯನಿ ಕುಂಜಿಬೆಟ್ಟು
ಉಡುಪಿ, ಎ.24: ಮೇರುನಟ ಡಾ.ರಾಜ್ಕುಮಾರ್ ತಮ್ಮ ವ್ಯಕ್ತಿತ್ವದಿಂದ, ನಟನೆಯಿಂದ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಹೆಸರಾದವರು. ರಂಗಭೂಮಿ ಹಿನ್ನಲೆಯಿಂದ ಬಂದ ಅವರು ಕನ್ನಡ ಚಿತ್ರಗಳ ಮೂಲಕ ವೌಲ್ಯಯುತ ಸಮಾಜ ನಿರ್ಮಾಣಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದವರು ಎಂದು ಲೇಖಕಿ, ಸಾಹಿತಿ ಕಾತ್ಯಾಯನಿ ಕುಂಜಿಬೆಟ್ಟು ಹೇಳಿದ್ದಾರೆ.
ನಾಯರ್ಕೆರೆಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಮಂಗಳವಾರ ಆಯೋಜಿಸಿದ್ದ ಡಾ. ರಾಜ್ಕುಮಾರ್ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಡಾ.ರಾಜ್ಕುಮಾರ್ ಅಭಿನಯಿಸಿದ ಚಿತ್ರಗಳು ಸದಭಿರುಚಿಯಿಂದ ಕೂಡಿದ್ದು, ಪೌರಾಣಿಕ, ಚಾರಿತ್ರಿಕ, ಸಾಮಾಜಿಕ ಎಲ್ಲ ರಂಗಗಳಲ್ಲಿಯೂ ಅವರು ಮಿಂಚಿದ್ದಾರೆ. ಮಹಿಳೆಯರಿಗೆ ಗೌರವ ನೀಡುವಂತಹ ಪಾತ್ರಗಳನ್ನು ಅಭಿನಯಿಸುವ ಮೂಲಕ ಡಾ.ರಾಜ್, ನಮ್ಮ ನಾಡಿನ ಸಂಸ್ಕೃತಿಯ ರಾಯಭಾರಿಯಾಗಿದ್ದರು. ಅವರ ಚಿತ್ರಗಳಲ್ಲಿ ಮನುಷ್ಯತ್ವ ಮತ್ತು ಚೆಲುವಿನ ಹುಡುಕಾಟವಿತ್ತು. ಬದುಕುವ ಶಿಕ್ಷಣ ಮತ್ತು ಬಾಳುವ ಸಂಸ್ಕೃತಿಗಳಿತ್ತು. ಕನ್ನಡ ಭಾಷೆಯ ಗಂಧ, ಚೆಂದ ಎಲ್ಲವೂ ಇತ್ತು. ತಮ್ಮ ಚಿತ್ರಗಳಲ್ಲಿ ಸತ್ಯ ಎನ್ನುವ ಸ್ಥಾಯಿಭಾವವನ್ನು ಪ್ರತಿಪಾದಿಸಿದವರು ಅವರು ಎಂದರು.
ಅವರ ಚಿತ್ರಗಳಲ್ಲಿ ಮಾನವೀಯ ವೌಲ್ಯಗಳು, ಸಾಮಾಜಿಕ ಸಂದೇಶಗಳಿದ್ದು, ಮನೆ ಮಂದಿಯೆಲ್ಲಾ ಒಟ್ಟಾಗಿ ಕುಳಿತು ಚಿತ್ರ ವೀಕ್ಷಿಸಬಹುದಾಗಿತ್ತು. ನಟನೆ ಮಾತ್ರವಲ್ಲದೆ ಸಂಗೀತದಲ್ಲೂ ಸಾಧನೆ ಮಾಡಿದ್ದ ಅವರು ಗಾನ ಗಂಧರ್ವರಾಗಿದ್ದರು. ಇಂದು ರಾಜ್ಕುಮಾರ್ ಭೌತಿಕವಾಗಿ ನಮ್ಮ್ಮಾಂದಿಗೆ ಇಲ್ಲದಿದ್ದರೂ ತಮ್ಮ ಅಭಿನಯದ ಚಿತ್ರಗಳ ಮೂಲಕ ಚಿರಂಜೀವಿಯಾಗಿದ್ದಾರೆ ಎಂದು ಡಾ.ಕಾತ್ಯಾಯಿನಿ ನುಡಿದರು.
ಡಾ.ರಾಜ್ಕುಮಾರ್ ಕುರಿತು ಮಾತನಾಡಿದ ಕತ್ತಲೆಕೋಣೆ ಚಿತ್ರದ ಯುವ ನಿರ್ದೇಶಕ ಹಾಗೂ ನಾಯಕ ನಟ ಸಂದೇಶ್, ಕನ್ನಡ ಚಿತ್ರರಂಗ ಬೆಳೆಯಲು ರಾಜ್ ಕುಮಾರ್ ನೀಡಿದ ಕೊಡುಗೆ ಅಮೂಲ್ಯ. ಅವರು ನುಡಿದಂತೆ ನಡೆದು ತೋರಿದವರು. ಅವರ ವ್ಯಕ್ತಿತ್ವ ಯುವ ನಟರಿಗೆ ಮಾದರಿ, ಅವರು ತೋರಿಸಿಕೊಟ್ಟ ದಾರಿಯಲ್ಲಿ ನಡೆಯುವುದಾಗಿ ಹೇಳಿದರು.
ಜಿಲ್ಲಾ ವಾರ್ತಾಧಿಕಾರಿ ರೋಹಿಣಿ ಕೆ. ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ್ ಸರಳೇಬೆಟ್ಟು ಉಪಸ್ಥಿತರಿದ್ದರು. ಕಾಪು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಕಾಶ್ ಸುವರ್ಣ ಕಟಪಾಡಿ ಸ್ವಾಗತಿಸಿ, ವಂದಿಸಿದರು