ದ್ವಿಚಕ್ರ ವಾಹನ ಕಳವು ಆರೋಪಿಗ ಬಂಧನ
ಮಂಗಳೂರು, ಎ. 24: ದ್ವಿಚಕ್ರ ವಾಹನ ಕಳವು ಆರೋಪಿಗಳಿಬ್ಬರನ್ನು ಉತ್ತರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಕೂಳೂರಿನ ಪಂಜಿನಮೊಗರು ನಿವಾಸಿ ಪ್ರವೀಣ್ ಮೊಂತೆರೊ(22) ಹಾಗೂ ಪದವಿನಂಗಡಿ ಬೋಳುಗುಡ್ಡೆಯ ಬಿಜಿನ್ ಯಾನೆ ವಿಜಯ್(20) ಬಂಧಿತ ಆರೋಪಿಗಳು.
ಮಾ.29ರಂದು ಬೆಳಗ್ಗೆ 10 ಗಂಟೆಗೆ ಮಂಗಳೂರು ನಗರದ ಬಾವುಟಗುಡ್ಡೆ ಬಳಿ ಪಾರ್ಕ್ ಮಾಡಿದ್ದ ಹೀರೋ ಹೋಂಡಾ ಮೋಟರ್ ಸೈಕಲ್ನ್ನು ಕಳ್ಳತನ ಮಾಡಿದ್ದರು.
ಆರೋಪಿ ಪ್ರವೀಣ್ ಎ.6ರಂದು ನಗರದ ನ್ಯೂಚಿತ್ರಾ ಬಳಿ ಬರುತ್ತಿದ್ದಾನೆಂಬ ಖಚಿತ ಮಾಹಿತಿಯಂತೆ ವಾಹನ ತಪಾಸಣೆ ಮಾಡುತ್ತಿದ್ದಾಗ ನಂಬರ್ ಪ್ಲೇಟ್ ಇಲ್ಲದೇ ಚಲಾಯಿಸಿಕೊಂಡು ಬರುತ್ತಿದ್ದ ವಾಹನವನ್ನು ನಿಲ್ಲಿಸಿದ್ದರು. ತಪಾಸಣೆ ಮಾಡಿದಾಗ ಕಳವುಗೈದ ವಾಹನವೆಂದು ಖಚಿತಪಟ್ಟಿತ್ತು. ಕೂಡಲೇ ವಾಹನವನ್ನು ಸ್ವಾಧೀೀನಪಡಿಸಿ ಆರೋಪಿ ಪ್ರವೀಣ್ ಮೊಂತೇರೊನನ್ನು ದಸ್ತಗಿರಿ ಮಾಡಲಾಯಿತು.
ಆರೋಪಿ ಪ್ರವೀಣ್ ಮೊಂತೇರೋ ನೀಡಿದ ಮಾಹಿತಿಯಂತೆ ಇನ್ನೊರ್ವ ಆರೋಪಿ ಬಿಜಿನ್ ಯಾನೆ ವಿಜಯ್ ಎಂಬಾತನನ್ನು ಪೊಲೀಸರು ನಗರದ ಪದವಿನಂಗಡಿ ಬಳಿಯಿಂದ ದಸ್ತಗಿರಿ ಮಾಡಿದ್ದಾರೆ.
ಕೇಂದ್ರ ಉಪವಿಭಾಗದ ಎಸಿಪಿ ಎಂ.ಜಗದೀಶ್ ನೇತೃತ್ವದಲ್ಲಿ ಮಂಗಳೂರು ಉತ್ತರ ಪೊಲೀಸ್ ಠಾಣಾ ನಿರೀಕ್ಷಕ ಯೋಗೀಶ್ ಕುಮಾರ್, ಪಿಎಸ್ಸೈ ಅನಂತ ಮುರುಡೇಶ್ವರ, ಎಸ್ಸೈ ಪದ್ಮನಾಭ, ಸಿಬ್ಬಂದಿಯಾದ ವೆಲೆಸ್ಟಿನ್ ಜಾರ್ಜ್ ಡಿಸೋಜ, ದಯಾನಂದ, ವಾಸು ನಾಯ್ಕ್, ರಮೇಶ್, ಬಸವರಾಜ್, ಸಾಗರ್ ಪತ್ತೆ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.